• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಹುಮುಖ ಪ್ರತಿಭಾಸಂಪನ್ನ ಡಾ. ಮಾರುತಿ ನಾಯಕ

July 11, 2021 by Vishwanath Shetty Leave a Comment

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿ ಸ್ವಾಭಿಮಾನ ಮತ್ತು ಸ್ವಂತಿಕೆಯನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಹಂತಹಂತವಾಗಿ ಸಾಧನೆಯ ಶಿಖರವೇರಿ ಭಾಷಣ – ಬರವಣಿಗೆ – ಯಕ್ಷಗಾನಗಳಲ್ಲಿ ಅಮೋಘವಾದ ನೈಪುಣ್ಯತೆಯನ್ನು ಸಂಪಾದಿಸಿದವರು ಡಾ. ಎಂ. ಆರ್. ನಾಯಕ.

M. R. Naik

ಹೊನ್ನಾವರ ಎಸ್.ಡಿ.ಎಂ. ಪದವಿಮಹಾವಿದ್ಯಾಲಯದಲ್ಲಿ ಕಳೆದ 33 ವರ್ಷಗಳಿಂದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ತರಗತಿ ಕೋಣೆಗಳಲ್ಲಿ ತಮ್ಮ ಪಾಂಡಿತ್ಯಪೂರ್ಣ ಉಪನ್ಯಾಸದಿಂದ ವಿದ್ಯಾರ್ಥಿಗಳ ಮನಗೆದ್ದ ಇವರು ಯಕ್ಷಗಾನದಲ್ಲಿಯೂ ಯಾವುದೇ ವೃತ್ತಿ ಕಲಾವಿದರಿಗೆ ಕಡಿಮೆ ಇಲ್ಲದಂತೆ ಮೆರೆದು ಯಕ್ಷರಸಿಕರ ಮನಸೂರೆಗೊಂಡವರು.

  • WhatsApp Image 2021 07 08 at 4.35.29 PM
  • WhatsApp Image 2021 07 08 at 4.35.33 PM

ಯಾವುದನ್ನೇ ಕಲಿಯಹೊರಟರೆ, ತಿಳಿಯ ಹೊರಟರೆ ಅದನ್ನು ಪೂರ್ತಿಯಾಗಿ ಕರಗತಮಾಡಿಕೊಳ್ಳುವುದು ನಾಯಕರ ವೈಶಿಷ್ಟ್ಯ. ಅಂತೆಯೇ ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಯಬೇಕೆಂಬ ಹಂಬಲಕ್ಕೆ ಮೊದಲು ಬೆಂಬಲವಾಗಿ ನಿಂತವರು ಹೊಸತೋಟ ಮಂಜುನಾಥ ಭಾಗವತರು. ಅನಂತರ ಉಮೇಶ ಭಟ್ಟ ಬಾಡ ಮತ್ತು ಕೃಷ್ಣ ಭಂಡಾರಿ ಗುಣವಂಂತೆ ಇವರ ಮಾರ್ಗದರ್ಶನದಲ್ಲಿ ನಿರಂತರ ಪರಿಶ್ರಮದಿಂದ ಹೆಜ್ಜೆಗಳನ್ನು ಕಲಿತು ಯಕ್ಷಗಾನದಲ್ಲಿ ನಾಯಕ-ಪ್ರತಿನಾಯಕ ಪಾತ್ರಗಳಿಗೆ ಗೆಜ್ಜೆ ಕಟ್ಟಿದರು. ವಿಶೇಷವಾಗಿ ಕೌರವ, ಕೀಚಕ, ಭೀಷ್ಮ, ಜಾಂಬವ, ಉಗ್ರಸೇನ, ಸುಧನ್ವ, ಹನುಮಂತ ಮೊದಲಾದ ಪಾತ್ರಗಳು ಇವರಿಗೆ ಸಿದ್ಧಿಯನ್ನೂ ಪ್ರಸಿದ್ಧಿಯನ್ನೂ ತಂದುಕೊಟ್ಟಿತು.

ಯಕ್ಷಗಾನವನ್ನು ವೃತ್ತಿಗಾಗಿ ಬಳಸದೇ ಇದರಿಂದ ಹೆಚ್ಚಿನದೇನನ್ನೂ ಗಳಿಸದೇ ಇದರ ಶ್ರೆÉೀಷ್ಠತೆಯನ್ನು ಸ್ವಪ್ರಚಾರದ ಸಾಧನದ ಮಟ್ಟಕ್ಕೆ ಇಳಿಸದೇ ಕೇವಲ ಆತ್ಮಾನಂದದ ಹವ್ಯಾಸಕ್ಕಾಗಿ ಬೆಳೆಸಿಕೊಂಡ ಇವರು ಚಿಟ್ಟಾಣಿ, ಕೊಂಡದಕುಳಿ, ತೋಟಿ, ಜಲವಳ್ಳಿ, ಯಲಗುಪ್ಪಾ, ನಿಲ್ಕೋಡ ಮೊದಲಾದವರ ಜೊತೆ ಪಾತ್ರಮಾಡಿದ್ದಲ್ಲದೇ ಸುಪ್ರಸಿದ್ಧ ಭಾಗವತರಾದ ಕೋಳಗಿ ಕೇಶವ ಹೆಗಡೆ, ಸುಬ್ರಹ್ಮಣ್ಯ ಧಾರೇಶ್ವರ, ರಾಘವೇಂದ್ರ ಜನ್ಸಾಲೆ, ಹಿಲ್ಲೂರು ರಾಮಕೃಷ್ಣ, ಸುರೇಶ ಶೆಟ್ಟಿ ಅವÀರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಕಲಾಗಂಗೋತ್ರಿಯ ಸದಸ್ಯರಾಗಿ, ರಂಗವೈಭವ ಕುಮಟಾದ ಅಧ್ಯಕ್ಷರಾಗಿ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಇವರು ವಿವೇಕ ನಗರ ವಿಕಾಸ ಸಂಘ ಕುಮಟಾದ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿಯೂ ನಿರಂತರವಾಗಿ ತೊಡಿಗಿಸಿಕೊಂಡಿದ್ದಾರೆ. ಇವರಲ್ಲಿ ಅರವತ್ತರಲ್ಲೂ ಅರಳುತ್ತಿರುವ ಉತ್ಸಾಹ ನಿಜವಾಗಿಯೂ ಮಾದರಿಯಾಗಿದೆ.

ಸ್ವತಃ ಕಲಾವಿದರೂ, ಅತ್ಯುತ್ತಮ ಸಂಘಟಕರೂ, `ನಾಯಕ’ ಪದಕ್ಕೆ ಅನ್ವರ್ಥವಾಗಿರುವ ಇವರು ಇದುವರೆಗೆ ಅನೇಕ ಸಂಘಸಂಸ್ಥೆಗಳ ಗೌರವಕ್ಕೆ ಭಾಜನರಾಗಿದ್ದಾರೆ. ಯಕ್ಷರಕ್ಷೆ ಮುರುಡೇಶ್ವರ, ಕಲಾಗಂಗೋತ್ರಿ ಕುಮಟಾ, ಹುಬ್ಬಳ್ಳಿಯ ಹೆಬ್ಬಳ್ಳಿ ಮಠ, ಅಂಕೋಲಾ, ಅಗಸೂರ, ಬೆಲೇಕೇರಿ, ಹೊನ್ನಾವರದ ನಾಗರಿಕರಿಂದ, ಕುಮಟಾ ನಾಡವರ ಸಮಾಜದಿಂದ ಹೀಗೆ ಹತ್ತು ಹಲವು ಸಂಘಟನೆಗಳು ಇವರಿಗೆ ಶಾಲು ಹೊದೆಸಿ ಪ್ರೀತಿಯ ಗೌರವ ನೀಡಿ ಸನ್ಮಾನಿಸಿದ್ದಾರೆ.

ಪ್ರಾಧ್ಯಾಪಕ, ಕಲಾವಿದ, ಸಂಘಟಕ, ನೇರ ನಡೆನುಡಿಯ ನಿರರ್ಗಳ ಮಾತುಗಾರ ಬಹುಮುಖ ಪ್ರತಿಭಾ ಸಂಪನ್ನ ಡಾ. ಎಂ. ಆರ್. ನಾಯಕ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳೆರಡಕ್ಕೂ ನ್ಯಾಯ ಒದಗಿಸುತ್ತಿರುವ ಅಪರೂಪದ ವ್ಯಕ್ತಿಯಾಗಿದ್ದು ಅನೇಕರ ಬಾಳಿಗೆ ಬೆಳಕಾಗಿದ್ದಾರೆ. 

ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಸಂಸ್ಕೃತಿ-ಕಲೆ Tagged With: ಅಂಕೋಲಾ, ಅಗಸೂರ, ಉಮೇಶ ಭಟ್ಟ ಬಾಡ, ಎಸ್.ಡಿ.ಎಂ. ಪದವಿಮಹಾವಿದ್ಯಾಲಯ, ಕಲಾಗಂಗೋತ್ರಿ ಕುಮಟಾ, ಕುಮಟಾ ನಾಡವರ ಸಮಾಜ, ಕೃಷ್ಣ ಭಂಡಾರಿ ಗುಣವಂಂತೆ ಇವರ ಮಾರ್ಗದರ್ಶನ, ಬೆಲೇಕೇರಿ, ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಯಬೇಕೆಂಬ, ಯಕ್ಷರಕ್ಷೆ ಮುರುಡೇಶ್ವರ, ಹುಬ್ಬಳ್ಳಿಯ ಹೆಬ್ಬಳ್ಳಿ ಮಠ, ಹೊನ್ನಾವರದ ನಾಗರಿಕರಿಂದ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...