ಹೊನ್ನಾವರ: ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಹೊನ್ನಾವರ ತಾಲೂಕ ಗಾಣಿಗ ಸಮಾಜ ಸಮಾಜದ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ಬಾಳೆಗದ್ದೆ ಯ ಶ್ರೀ ವೆಂಕ್ರಟಮಣ ದೇವಾಲಯದಲ್ಲಿ ವಿತರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದ ವಿದ್ಯುತ್ ಗುತ್ತಿಗೆದಾರರಾದ ಎಸ್.ಕೆ. ಶೆಟ್ಟಿ ಮಾತನಾಡಿ ಸಂಘಟನೆಗೆ ಶಕ್ತಿ ಬರಬೇಕಾದರೆ ಸಮಾಜದ ಬೆಂಬಲ ಅಗತ್ಯವಿದೆ.
ಸಮಾಜಬಾಂಧವರೆಲ್ಲರೂ ಒಂದಾದಲ್ಲಿ ಇಂತಹ ಉತ್ತಮ ಕಾರ್ಯ ಮಾಡಲು ಸಾಧ್ಯವಿದೆ. ಈ ಕಾರ್ಯ ಮುಂದಿನ ದಿನದಲ್ಲಿ ಮುಂದುವರೆಸಿ ಸಮಾಜದ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಸಲಹೆ ನೀಡಿದರು.೧೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಗತಿಗೆ ಅನುಸಾರವಾಗಿ ಅಗತ್ಯವಿರುವ ನೊಟಬುಕ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಆರ್.ಬಿ.ಶೆಟ್ಟಿ ಮಾತನಾಡಿ ಸಮಾಜದ ಸಹಕಾರದೊಂದಿಗೆ ಕಳೆದ 19ವರ್ಷದಿಂದ ನೋಟ್ ಬುಕ್ ವಿತರಿಸುವ ಮೂಲಕ ಶೈಕ್ಷಣಿಕವಾಗಿ ಪೊತ್ಸಾಹ ನೀಡುತ್ತಾ ಬಂದಿದ್ದೇವೆ.ಮುಂದಿನ ದಿನದಲ್ಲಿ ಇದೇ ರೀತಿ ಹಲವು ಜನಪರ ಕಾರ್ಯಕ್ರಮ ಮಾಡುವ ಮೂಲಕ ಸಂಘಟನೆಯನ್ನು ಬಲಪಡಿಸಲು ಸಮಾಜದ ಸಹಕಾರ ನೀಡುವಂತೆ ಕೋರಿದರು.ವೇದಿಕೆಯಲ್ಲಿ ಸದಸ್ಯರಾದ ಕೇಶವ ಶೆಟ್ಟಿ, ಗೋವಿಂದ ಶೆಟ್ಟಿ, ನಾಗೇಶ ಶೆಟ್ಟಿ, ಆನಂದ ಶೆಟ್ಟಿ,ಚೈತ್ರ ಹಳದೀಪುರ ಉಪಸ್ಥಿತರಿದ್ದರು.ಶಿಕ್ಷಕ ಮಹೇಶ ಕವಲಕ್ಕಿ ಸ್ವಾಗತಿಸಿ, ರವಿ ಗುಂಡಬಾಳ ವಂದಿಸಿದರು.
Leave a Comment