ಹೊನ್ನಾವರ
ದಿನಾಂಕ 13/06/2021ರಂದು ನಡೆದ ಹೊನ್ನಾವರ ಫೋಟೊಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಕೇಶವ ಎಲ್ ಮೇಸ್ತರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸುಭಾಷ ನಾಯ್ಕ ಮತ್ತು ಲಕ್ಷ್ಮೀಷ ಭಂಡಾರಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಹಳ್ಳೆರ, ಸಹ ಕಾರ್ಯದರ್ಶಿಯಾಗಿ ರಾಮಕೃಷ್ಣ ಹೆಗ್ಡೆ ಮತ್ತು ಸತಿಶ ಜಲವಳ್ಳಿ, ಖಜಾಂಚಿಯಾಗಿ ಸುರೇಶ ಹೊನ್ನಾವರ ಮತ್ತು ಸಂಘಟಣಾ ಕಾರ್ಯದರ್ಶಿಯಾಗಿ ಎನ್ ಗಣಪತಿಯವರನ್ನ ಆಯ್ಕೆ ಮಾಡಲಾಯಿತು.
ಸಭೆಯ ಪ್ರಾರಂಭದಲ್ಲಿ ಅಕಾಲಿಕ ಮರಣ ಹೊಂದಿದ ದುರ್ಗಾದಾಸ ಜೈವಂತ, ಅಜಂತಾ ಸ್ಟುಡಿಯೋ ಸಿರಸಿ, ಅರವಿಂದ ಜೈವಂತ, ಜೈವಂತ ಸ್ಟುಡಿಯೊ ಅಂಕೊಲಾ, ಈಶ್ವರ ನಂದಿ ಹೆಗ್ಡೆ, ಕಲಾಭಾರತಿ ಆರ್ಟ ಸ್ಟುಡಿಯೊ ಅಂಕೋಲಾ, ಅಶೋಕ ಶೆಟ್ಟಿ, ಮಾನಸಾ ಸ್ಟುಡಿಯೊ ಉಪ್ಪುಂದ, ಸಲಿಂ ಕೆ.ಪಿ.ಎ ಮಾಜಿ ನಿರ್ದೆಶಕರು ಮಡಿಕೆರಿ, ದಿಲಿಪ ಮುಂಡರಗಿ, ಮುಂಡರಗಿ ಸ್ಟುಡಿಯೊ ಗದಗ ಅವರಿಗೆ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.
Leave a Comment