ಕಾರವಾರ ;
ನಗರದ ಟ್ಯಾಗೋರ್ ಕಡಲ ತೀರದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪ್ಲೈಓವರ್ ಕೆಳಗೆ ಬೀದಿನಾಯಿಗಳನ್ನು ಯಾರು ನಿರಂತರವಾಗಿ ಕೊಲ್ಲುತ್ತಿದ್ದಾರೆ ನಂತರ ಅವುಗಳನ್ನು ಸುಟ್ಟು ಹಾಕುತ್ತಿದ್ದಾರೆ.
ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಶ್ವಾನ ಪ್ರಿಯರು ಆಗ್ರಹಿಸಿದ್ದಾರೆ . ಶನಿವಾರ ಸಂಜೆ ಎರಡು ನಾಯಿಗಳನ್ನು ಕೊಲ್ಲಲಾಗಿದೆ. ಅವುಗಳ ಶರೀರವನ್ನು ಅರೆಬರೆಯಾಗಿ ಸುಟ್ಟು ಬೀದಿಯಲ್ಲಿ ಬಿಡಲಾಗಿದೆ. ಬೀದಿನಾಯಿಗಳಿಗೆ ಕೂಡ ಬದುಕುವ ಹಕ್ಕಿದೆ. ಅವುಗಳಿಗೆ ನಿಯಮಿತವಾಗಿ ನಾವು ಆಹಾರ ನೀಡುತ್ತೇವೆ. ಅವುಗಳನ್ನು ಈ ರೀತಿ ಅಮಾನವೀಯವಾಗಿ ಕೊಲ್ಲುವುದು ಖಂಡನೀಯ. ಇದನ್ನು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಂದು ನಗರದ ನಿರ್ಮಲಾ
ಆಲ್ಫಾನ್ಸೊ ಒತ್ತಾಯಿಸಿದ್ದಾರೆ.
ಮಳೆಯು ನಿರಂತರವಾಗಿ ಸುರಿಯುತ್ತಿರುವ ಕಾರಣ ನಾಯಿಗಳ ಅರೆಬೆಂದ ಕಳೆಬರಹ ಬೇಗ ಕೊಳೆಯುವ ಸಾಧ್ಯತೆ ಯಿದೆ . ಅಲ್ಲದೇ ಹದ್ದು ಕಾಗೆ ಗಳು ಇಡೀ ಪ್ರದೇಶದಲ್ಲಿ ಚೆಲ್ಲಾಡುವ ಸಾಧ್ಯತೆ ಇದೆ ಇದು ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಇಂಥ ಕೃತ್ಯ ಮಾಡುವವರನ್ನು ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Leave a Comment