ಯಲ್ಲಾಪುರ: ನಮ್ಮ ಜಿಲ್ಲೆಯ ಪತ್ರಕರ್ತರು ಇಲ್ಲಿ ಆಗಬೇಕಾದ ಅಭಿವೃದ್ದಿಯ ಕುರಿತು ಬೆಳಕು ಚೆಲ್ಲುವ ವರದಿಯನ್ನು ವಿವೇಚನೆಯಿಂದ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಅವರ ಮೇಲಿದೆ. ಇಂದು ಮಾಧ್ಯಮವೃತ್ತಿಗಿರುವ ಗೌರವ ಕಡಿಮೆಯಾಗುತ್ತಿರುವದಕ್ಕೆ ಒಂದೆಡೆ ನಾವು ಕಾರಣಿಭೂತರೆಂದರೂ ತಪ್ಪಾಗಲಿಕ್ಕಿಲ್ಲ.
ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ಎಪಿಎಂಸಿ ಆವಾರದ ಅಡಿಕೆಭವನದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಹಾಗೂ ಹಿರಿಯ ಪತ್ರಕರ್ತರಾದ ಜಯರಾಮ ಹೆಗಡೆ ಹಾಗೂ ಹೊಸದಿಗಂತ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ ವಿಠ್ಠಲದಾಸ ಕಾಮತ ಅವರಿಗೆ ಕೆ.ಶ್ಯಾಮರಾವ ಪ್ರಶಸ್ತಿ ಪ್ರಧಾನ ,ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ.
ಜನಪ್ರತಿನಿಧಿಗಳು ಟೀಕೆಗಳನ್ನು ಪ್ರಾಂಜ್ವಲ ಮನಸ್ಸಿನಿಂದ ಸ್ವೀಕರಿಸಿದಾಗ ಮಾದ್ಯಮದವರಿಗೆ ಸಮಾಜದ ಅಂಕು ಡೊಂಕನ್ನು ತಿದ್ದುವ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರಲ್ಲದೇ ಪತ್ರಕರ್ತರ ಬೇಡಿಕೆಯಂತೆ ಅವರನ್ನು ಕಾರ್ಮಿಕ ಇಲಾಖೆಯಡಿ ತರಲು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು ನೀಡಿದರು
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ ಪತ್ರಕರ್ತರ ವೃತ್ತಿ ಅನೇಕ ವೈರುಧ್ಯವನ್ನು ಎದುರಿಸಿ ಮಾಡುವ ಕಷ್ಟಕರ ವೃತ್ತಿಯಾಗಿದೆ.
ಕೋರೋನಾ ತಂದ ತಲ್ಲಣದಿಂದ ಸುದ್ದಿಮನೆಯ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹಾಗೇ ಕೊರೋನಾಕ್ಕೆ ಬಲಿಆಗಿದ್ದಾರೆ.ಮಾನ್ಯ ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿ ಸಾವನ್ನಪ್ಪಿದ ಪತ್ರಕರ್ತರ ಕುಟುಂಬಕ್ಕೆ ೫ಲಕ್ಷ ಪರಿಹಾರ ಘೋಷಿಸಿದರು. ೩೧ ಪತ್ರಕರ್ತರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಎಂದರಲ್ಲದೇ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಕಾರ್ಮಿಕ ಇಲಾಖೆಯಡಿ ತರುವಂತೆ ಆಗ್ರಹಿಸಿದರು. ತಾಲೂಕಾ ಕಾನಿಪ ಸಂಘದಿAದ ಸಾಹಿತಿ ಗಣಪತಿ ಬಾಳೆಗದ್ದೆ, ಪತ್ರಿಕೆ ಸಾಗಾಟಗಾರ ಪ್ರಶಾಂತ ಗೋಖಲೆ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಜಿಲ್ಲಾ ಕಾನಿಪ ಅಧ್ಯಕ್ಷ ರಾಧಕೃಷ್ಣ ಭಟ್ಟ ವಹಿಸಿದ್ದರು. ಹಿರಿಯ ಪತ್ರಕರ್ತೆ ಶೈಲಜಾ ಗರ್ಮನೆ ದಿಕ್ಸೂಚಿ ಭಾಷಣ ಮಾಡಿದರು. ವಾಕರರಾಸಾ ನಿಗಮದ ಅಧ್ಯಕ್ಷ ವಿ.ಎಸ ಪಾಟೀಲ, ಪಂ.ರಾ.ವಿ.ಅಭಿವೃದ್ದೀ ಯೋಜನೆ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾದಾಸ, ಕಾನಿಪಸಂಘದ ರಾಜ್ಯ ಸಮಿತಿ ಸದಸ್ಯ ಸುಬ್ರಾಯ ಭಟ್ಟ ಬಕ್ಕಳ, ಸಿಪಿಐ ಸುರೇಶ ಯಳ್ಳೂರ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಂ. ಆರ್ ಹೆಗಡೆ ಜಿಲ್ಲಾ ಕಾನಿಪ ಸಂಘದ ಕಾರ್ಯದರ್ಶಿ ನರಸಿಂಹ ಅಡಿ, ಉಪಾಧ್ಯಕ್ಷರಾದ ಬಿ.ವಿ ಪಾಟೀಲ, ಅನಂತ ದೇಸಾಯಿ ಉಪಸ್ಥಿತರಿದ್ದರು.ಸ್ವಾತಿ ಪ್ರಣತಿ ಪ್ರಾರ್ಥಿಸಿದರು.
ತಾಲೂಕಾ ಕಾನಿಪ ಅಧ್ಯಕ್ಷ ಕೆ.ಎಸ್ ಭಟ್ಟ ಸ್ವಾಗತಿಸಿದರು. ಉಪಾಧ್ಯಕ್ಷ ಜಿ.ಎನ್ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶ್ರೀಧರ ,ಖಜಾಂಚಿ ಪ್ರಭಾವತಿ ಗೋವಿ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಸಹಕಾರ್ಯದರ್ಶಿಕೇಬಲ್ ನಾಗೇಶ ನಿರ್ವಹಿಸಿದರು.
Leave a Comment