ಹೊನ್ನಾವರ: ಪಟ್ಟಣಕ್ಕೆ ಮಿನಿವಿಧಾನಸೌದಕ್ಕೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ನಾಯ್ಕ ಸಾರ್ವಜನಿಕರ ಅನೂಕೂಲಕ್ಕಾಗಿ ಕುಡಿಯುವ ನೀರಿನ ಪಿಲ್ಟರ್ ಕೊಡುಗೆ ನೀಡಿದರು. ಈ ಹಿಂದಿನಿಂದಲೂ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಈ ಹಿಂದೆ ಕೊರೋನಾ ಸಮಯದಲ್ಲಿ ಬಡ ಕುಟುಂಬಗಳಿಗೆ ಕಿಟ್ ಹಾಗೂ ಅನೇಕ ಶಾಲಾ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಚಿಕಿತ್ಸೆ ಪಡೆಯುತ್ತಿದ್ದ ವಿವಿಧ ರೋಗಿಗಳಿಗೆ ಆಸ್ಪತ್ರೆಯ ಬಿಲ್ ಸಹಾಯ ಮಾಡುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದರು. ಇದೀಗ ತೀರಾ ಅಗತ್ಯವಿರುವ ಮಿನಿವಿಧಾನಸೌದದಲ್ಲಿ ಕುಡಿಯುವ ನೀರಿನ ಪಿಲ್ಟರ್ ತಹಶೀಲ್ದಾರ ವಿವೇಕ ಶೇಣ್ವಿ ಮೂಲಕ ಹಸ್ತಾಂತರಿಸಿದರು.
ಶ್ರೀಕಾಂತ ನಾಯ್ಕ ಮಾತನಾಡಿ ಸಾರ್ವಜನಿಕರಿಗೆ ತೀರಾ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯ ವಿತರಿಸುವ ದೃಷ್ಟಿಯಿಂದ ನೀಡಲಾಗಿದೆ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ತಹಶೀಲ್ದಾರ ವಿವೇಖ ಶೇಣ್ವಿ ಮಾತನಾಡಿ ಕೋವಿಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಹೊರಗಡೆಯಿಂದ ತರಲು ಕಷ್ಟ ಸಾರ್ಧಯವಾಯಿತು.
ವಿವಿಧ ಸೌಲಭ್ಯ ಪಡೆಯಲು ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಹಾಗೂ ಕತ್ಯರ್ವ ನಿರ್ವಹಿಸುವ ಸಿಬ್ಬಂದಿಗಳಿಗೆ ತೀರಾ ಅಗತ್ಯ ಸಲಕರಣೆ ನೀಡಿದ್ದು ಇತರೆ ದಾನಿಗಳಿಗೆ ಇದು ಪ್ರೇರಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ್ ನಾಯ್ಕ, ರಾಘವೇಂದ್ರ ಮೇಸ್ತ್ರ, ರವಿ ನಾಯ್ಕ ರಾಯಲಕಏರಿ, ಎಸ್.ಕೆ.ಮೇಸ್ತ, ಪ್ರಶಾಂತ ನಾಯ್ಕ, ಲೋಕೇಶ ಮೇಸ್ತ, ಸೈಮನ್, ರವಿಂದ್ರನ್ ಗಣಪತಿ ಮತ್ತಿತರರು ಹಾಜರಿದ್ದರು.
Leave a Comment