ಸಿದ್ದಾಪುರ : ಪಟ್ಟಣದ ಇಂಡೆನ್ ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನವಾದ ಇಂಡೆನ್ ಕಂಪನಿಯ 18 ಖಾಲಿ ಸಿಲಿಂರ್ಗಳ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೇಡ್ಕಣಿಯ ಮುಕುಂದ ಹನುಮಂತ ಮಡಿವಾಳ (30) ಈತ ಇಂಡೇನ್ ಗ್ಯಾಸ್ ಎಜೆನ್ಸಿ ಲಾರಿ ಚಾಲಕ ಹಾಗೂ ಶಿಗ್ಗಾವಿಯ ಚಂದ್ರು ಮಲ್ಲೇಶಪ್ಪ ತಿಡ್ಡೆನವರ (32) ಈತ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸಗಾರ ಬಂಧಿತ ಆರೋಪಿಗಳಾಗಿದ್ದಾರೆ. ಬಂದಿತರಿAದ 41,400 ರು. ಮೌಲ್ಯದ 18 ಖಾಲಿ ಸಿಲಿಂಡರ್ ಹಾಗೂ ಕಳ್ಳತನ ಮಾಡಲು ಬಳಸಿದ 40,000 ರು. ಬೆಲೆಯ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್ನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಜು.27 ರಂದು ಪಟ್ಟಣ ಇಂಡೆನ್ ಗ್ಯಾಸ್ ಏಜೆನ್ಸಿಯಲ್ಲಿ ಇಂಡೆನ್ ಕಂಪನಿಯ 18 ಖಾಲಿ ಸಿಲಿಂಡರ್ಗಳ ಕಳ್ಳತನವಾಗಿತ್ತು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು ಕಳ್ಳತನ ಪ್ರಕರಣ ನಡೆದು ಎರಡೇ ದಿನಗಳಲೇ ಕಳ್ಳರನ್ನು ಪತ್ತೆ ಮಾಡಲಾಗಿದೆ.
ಈ ಪ್ರಕರಣದ ಪತ್ತೆಯ ಕುರಿತು ಹಿರಿಯ ಪೊಲೀಸ್ ನಿರೀಕ್ಷಕರು. ಮಂಜೇಶ್ವರ ಚಂದಾವರ ಪಿಎಸೈ ಮಹಾಂತಪ್ಪ ಕುಂಬಾರ ಪಿಎಸೈ ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಂಗಾಧರ ಹೊಂಗಲ್, ರಮೇಶ್ ಕೂಡಲ, ರವಿ ಜಿ. ನಾಯ್ಕ ಇದ್ದರು.
Leave a Comment