ಹೊನ್ನಾವರ; ಜಿಲ್ಲೆಯ ಮೀನುಗಾರರು ಸಮುದ್ರದ ಮೂಲಕ ರಾಜ್ಯದ ವಿವಿಧ ಭಾಗ ಅಷ್ಟೆ ಅಲ್ಲದೇ ಹೊರ ರಾಜ್ಯಕ್ಕೂ ಹೋಗುವುದರಿಂದ ಮೀನುಗಾರರ ಆರೊಗ್ಯದ ಬಗ್ಗೆ ಕಾಳಜಿ ವಹಿಸಿ ಶಾಸಕ ದಿನಕರ ಶೆಟ್ಟಿ ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾ ಪ್ರವಾಸದ ವೇಳೆ ಮನವಿ ಮಾಡಿದ್ದರು. ಶಾಸಕರ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಕೋಡಲೇ ಸ್ಪಂದಿಸಿದ್ದರು.
ಇದರಿಂದ ಜಿಲ್ಲೆಯ ನಾಲ್ಕು ತಾಲೂಕಿಗೆ ತಲಾ ಮೂರು ಸಾವಿರದಂತೆ ಲಸಿಕೆ ನೀಡುವ ಮೂಲಕ ಮೀನುಗಾರರ ಆರೊಗ್ಯದ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಲಸಿಕಾ ಅಭಿಯಾನ ಹಮ್ಮಿಕೊಳ್ಳಲು ಕಾರಣರಾದ ಶಾಸಕ ದಿನಕರ ಶೆಟ್ಟಿ ಹಾಗೂ ಸರ್ಕಾರಕ್ಕೆ ಸಮಸ್ತ ಮೀನುಗಾರರ ಪರವಾಗಿ ಹೊನ್ನಾವರ ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ ಮೇಸ್ತ ಅಭಿನಂದಿಸಿದ್ದಾರೆ.
Leave a Comment