ಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೩ ರ ಅರಬೈಲ್ ಘಟ್ಟ ಬಳಿ ಗುಡ್ಡ ಕುಸಿದು ರಸ್ತೆ ಸಂಪರ್ಕಕಡಿತವಾಗಿದ್ದರಿಂದ ಭಾರಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದೀಗ ತಾತ್ಕಾಲಿಕ ವಾಗಿ ಪರ್ಯಾಯ ರಸ್ತೆ ನಿರ್ಮಿಸಲಾಗಿದೆ.ಮಂಗಳವಾರ ಭಾರಿ ವಾಹನ ಗಳ ಸಂಚಾರ ಕಂಡು ಬಂದಿತು.
ಈ ಕುರಿತು ಪೋಲಿಸ್ ಇಲಾಖೆವರನ್ನು ಸಂಪರ್ಕಿಸಿದಾಗ ರಸ್ತೆಯ ಸಾಮರ್ಥ್ಯ ಪರೀಕ್ಷೆಗಾಗಿ ಭಾರಿ ವಾಹನಗಳನ್ನು ಪ್ರಾಯೋಗಿಕವಾಗಿ ಅಂಕೋಲಾ ಕಡೆಯಿಂದ ಬಿಟ್ಟಿರಬಹುದು . ಆದರೆ. ಯಲ್ಲಾಪುರ ದಿಂದ ಭಾರಿ ವಾಹನಗಳನ್ನು ಬಿಟ್ಟಿಲ್ಲ ಜಿಲ್ಲಾಧಿಕಾರಿಗಳ ಆದೇಶ ಬಂದ ನಂತರ ಇಲ್ಲಿಂದ ಬಿಡಲಾಗುವದು ಎಂದು ತಿಳಿಸಿದರು.
ಆದರೆ ಇದನ್ನರಿಯದ ದೂರದ ಊರುಗಳಿಂದ ಬಂದು ಕಳೆದ ಹದಿನೈದು ದಿನಗಳಿಂದ ರಸ್ತೆಯ ಮೇಲೆಯೇ ಇರುವ ವಾಹನ ಚಾಲಕರಲ್ಲಿ ನಮಗೆ ಬಿಡುತ್ತಿಲ್ಲ ಸ್ಥಳೀಯರಿಗೆ ಅಷ್ಟೇ ಬಿಡುತ್ತಾರೆ ಎಂಬ ಗೊಂದಲವುAಟಾಗುವಂತೆ ಆಗಿದೆ. ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ಪ್ರತಿಕ್ರಿಯಿಸಿ ಯಲ್ಲಾಪುರದಲ್ಲಿ ರಸ್ತೆಯುದ್ದಕ್ಕೂ .ವಾಹನಗಳು ಈರೆಗೂ ಹಾಗೆ ನಿಂತಿವೆ.
ಚಾಲಕರ ಸುರಕ್ಷಿತ ದೃಷ್ಟಿಯಿಂದ ಪ್ರಾಯೋಗಿಕವಾಗಿ ೭.೮ ವಾಹನಗಳನ್ನು ನಿಧಾನವಾಗಿ ಚಲಿಸಲು ಬಿಟ್ಟು ಪರೀಕ್ಷಿಸಲಾಗಿದೆ. ಯಾವದೇ ಗೊಂದಲ ಮಾಡಿಕೊಳ್ಳಬಾರದು.ನಾಳೆ (ಬುಧವಾರ)ಎಲ್ಲ ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು
Leave a Comment