ಹೊನ್ನಾವರ: ತಾಲೂಕಿನಲ್ಲಿ ಹಲವು ಸಾಧನೆ ಮುಡಿಗೇರಿಸಿಕೊಂಡ ಹಡಿನಬಾಳ ಸರ್ಕಾರಿ ಪ್ರೌಡಶಾಲೆಯಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ವನಮಹೊತ್ಸವಕ್ಕೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. ನಂತರ ಮಾತನಾಡಿ ಈ ಪ್ರೌಡಶಾಲೆ ಶೈಕ್ಷಣಿಕ ಹಾಗೂ ಪಠೈತರ ವಿಷಯದಲ್ಲಿ ಹಲವು ಸಾಧನೆ ಮಾಡಿದೆ.
ಇದೀಗ ವನಮಹೊತ್ಸವದ ಮೂಲಕ ಪರಿಸರ ಕಾಳಜಿ ತೋರುತ್ತಿದೆ ಇದು ಇತರ ಪ್ರೌಡಶಾಲೆಗೆ ಮಾದರಿ ಎಂದರು. ಈ ವೇಳೆ ಪ್ರೌಡಶಾಲೆಯ ಪ್ರಾರ್ಚಾಯ ಆರ್.ಟಿ.ನಾಯ್ಕ, ಸಿಪಿಐ ಶ್ರೀಧರ ಎಸ್.ಆರ್. ಶಾಲೆಯಶಿಕ್ಷಕರು, ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.
Leave a Comment