ಹೊನ್ನಾವರ: ತಾಲೂಕಿನ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಇವರನ್ನು ಆಯ್ಕೆ ಮಾಡಲಾಗಿದೆ.ಹೊನ್ನಾವರ ತಾಲೂಕ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾಗಿ ಶ್ರೀ ಶಂಕರ ಗೌಡ ಗುಣವಂತೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹೊನ್ನಾವರ ಇದರ ಸಹ ಕಾರ್ಯದರ್ಶಿಯಾಗಿ, ಅರಸುವೇದಿಕೆಯ ಪ್ರಮುಖ ಸದಸ್ಯರಾಗಿ, ಗುಣವಂತೆ ಸುಭಾಷ್ ಯುವಕ ಮಂಡಳದ ಅಧ್ಯಕ್ಷರಾಗಿ ಇರುವ ಇವರು ಯುವ ಕವಿ ಬರಹಗಾರರಾಗಿದ್ದಾರೆ.
ಕೋರೋನಾ ಸಮಯದಲ್ಲಿ ಕಿಟ್ ಹಾಗೂ ಲಾಕ್ ಡೌನ್ ಅವಧಿಯಲ್ಲಿ ಮನೆ ಬಾಗಿಲಿಗೆ ವೈದ್ಯಕೀಯ ಸೌಲಭ್ಯ ನೀಡುವ ಮೂಲಕ ಸಮಾಜ ಮುಖಿ ಕಾರ್ಯವನ್ನು ಮಾಡಿದ್ದರು. ಇನ್ನು ಉಪಾಧ್ಯಕ್ಷರಾಗಿ ಬಾಲಚಂದ್ರ ಗೌಡ ದಿಬ್ಬಣಗಲ್ ಆಯ್ಕೆಯಾಗಿದ್ದು ಬಿಜೆಪಿ ಓಬಿಸಿ ಮೊರ್ಚಾ ಪ್ರಧಾನ ಕಾರ್ಯದರ್ಶಿ, ತಾಲೂಕ ಗೋರಕ್ಷಣಾ ವೇದಿಕೆಯ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಕ್ಕಲಿಗ ಯುವ ವೇದಿಕೆಯು ಸರ್ವಾನುಮತದಿಂದ ಇರ್ವರನ್ನು ಆಯ್ಕೆ ಮಾಡಿದೆ.