ಹೊನ್ನಾವರ ಪಟ್ಟಣದ ಗಾಂಧಿನಗರದ ಪುರಭವನದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೊಡಲಾಗುವ ಕಿಟ್ ವಿತರಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಕಳೆದ ಎರಡು ದಿನದ ಹಿಂದೆ ಕೋವಿಡ್ ಹೆಚ್ಚಳದ ಹಿನ್ನಲೆ ಸಭೆ ಸಮಾರಂಭ ಪ್ರತಿಭಡನೆಗೆ ಕಠಿಣ ನಿಯಮ ಜಾರಿಗೆ ತಂದಿದ್ದಾರೆ.
ಮದುವೆಗೆ ಗರಿಷ್ಟ ೫೦ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ನಿಯಮ ಜನಸಾಮನ್ಯರಿಗೆ ಮಾತ್ರ ಅನ್ವಯವಾ ಅಥವಾ ಸರ್ಕಾರಿ ಅಧಿಕಾರಿಗಳಿಗೆ ಅನ್ವಯಿಸುದಿಲ್ಲವಾ ಎನ್ನುವ ಪ್ರಶ್ನೆ ಮನೆ ಮಾಡಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಾವಿರಕ್ಕೂ ಅಧಿಕ ಜನರನ್ನು ಕರೆದು ಕಿಟ್ ನೀಡಿದ್ದಾರೆ. ಸರತಿ ಸಾಲಿನಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೇ ಕೊರೋನಾ ಸುರಕ್ಷತಾ ನಿಯಮ ಗಾಳಿಗೆ ತೂರಿ ವಿತರಿಸಲಾಗಿದೆ.
ಸ್ಥಳೀಯ ಆಡಳಿತ ಮತ್ತು ಕೋರೊನಾ ನಿಯಂತ್ರಿಸುವ ಸಂಬಂದಿಸಿದ ಇಲಾಖೆಯವರು ಎಲ್ಲಾ ನೀತಿ,ನಿಯಮಾವಳಿಗಳನ್ನು ಗಾಳಿಗೆ ತುರಿದೆ.ಹೊನ್ನಾವರ ಸ್ಥಳೀಯ ಆಡಳಿತ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಅನ್ನುವ ನೀತಿ ಅನುಸರಿಸುತ್ತಿದೆ.ಸ್ಥಳೀಯ ಆಡಳಿತ ನಿಯಂತ್ರಿಸುವವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ
Leave a Comment