ಹೊನ್ನಾವರ : ನವಗ್ರಾಮ ಯೋಜನೆಯಡಿಯಲ್ಲಿ ಮನೆಗೆ ಮಂಜೂರಾದ ಜಾಗದಲ್ಲಿ ಅನ್ಯ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿ ನಿರ್ಮಿಸಿದ ಗೂಡಂಗಡಿಯನ್ನು ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯಗಜ ಸೇನೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಆಗ್ರಹಿಸಿದರು.
ಹೊನ್ನಮ್ಮ ಮಂಜುನಾಥ ನಾಯ್ಕ ಎನ್ನುವ ಮಹಿಳೆಗೆ ನವಗ್ರಾಮ ಯೋಜನೆಯಡಿಯಲ್ಲಿ ಈ ಹಿಂದೆ ಮಂಜೂರಾದ ಜಾಗದಲ್ಲಿ ಇದೀಗ ಒತ್ತುವರಿಯಾಗಿದ್ದು ಮಹಿಳೆಗೆ ಮನೆ ಕಟ್ಟಲು ತೊಂದರೆಯಾಗುತ್ತಿದೆ. ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆಯ ವತಿಯಿಂದ ಮಿನಿವಿಧಾನಸೌದದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಶೀಘ್ರವೇ ಅತಿಕ್ರಮಣ ತೆರವುಗೊಳಿಸಿ ಮಹಿಳೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ನೀಲಕಂಠ ನಾಯ್ಕ ಮಾಧ್ಯಮದವರೊಂದಿಗೆ ಮಾತನಾಡಿÀ ಹೊನ್ನಮ್ಮ ಮಂಜುನಾಥ ನಾಯ್ಕ ಇವರಿಗೆ ಮಂಜೂರಾದ ಜಾಗದಲ್ಲಿ ಮನೆಗೆ ಅಡಿಪಾಯ ಹಾಕಿದ್ದರು, ಅವರ ಮಗನ ಅಗಲುವಿಕೆಯಿಂದ ಮನೆ ನಿರ್ಮಾಣದ ಕಾರ್ಯ ಅರ್ಧಕ್ಕೆ ನಿಂತಿತ್ತು. ನಂತರ ಆ ಜಾಗವನ್ನು ಇನ್ನೊಬ್ಬ ವ್ಯಕ್ತಿ ಅತಿಕ್ರಮಣ ಮಾಡಿದ್ದಾರೆ. ಇದರಿಂದ ಇವರ ಮನೆಯ ನಿರ್ಮಾಣಕ್ಕೆ ತೊಂದರೆಯಾಗಿದೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ನೀಡಿದರು ಅಧಿಕಾರಿಗಳು ಸ್ಪಂದಿಸಿಲ್ಲ ಎಂದರು .
ಗಣೇಶ್ ನಾಯ್ಕ ಮಾತನಾಡಿ ಅತಿಕ್ರಮಣದ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿ ಪ್ರಯೋಜನವಾಗಲಿಲ್ಲ ನಾವು ಇದುವರೆಗೂ ಶಾಂತಿಯುತ ಪ್ರತಿಭಟನೆ ನಡೆಸಿದ್ದೆವೆ. 2 ದಿನದೊಳಗೆ ಅತಿಕ್ರಮಣ ತೆರವುಗೊಳಿಸಿ ಮಹಿಳೆಗೆ ನ್ಯಾಯ ಒದಗಿಸದೇ ಇದ್ದಲ್ಲಿ ಭಟ್ಕಳ ಸಹಾಯಕ ಆಯುಕ್ತರ ಕಛೇರಿಯ ಎದುರು ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶಿಲ್ಪಾ ನಾಯ್ಕ. ಪದಾದಿಕಾರಿಗಳಾದ ವಿನೋದ ಗೌಡ, ಶೇಖರ ಮೋಗೆರ್, ಮಹೇಶ ನಾಯ್ಕ, ಗಿರೀಶ ನಾಯ್ಕ, ನೀಲಕಂಠ ನಾಯ್ಕ ಮುಂತಾದವರು ಇದ್ದರು.
Leave a Comment