ಶಿರಸಿ : ಸರ್ಕಾರದ ಮೇಲೆ ಸರ್ಕಾರಗಳು, ಮಂತ್ರಿಗಳ ಮೇಲೆ ಮಂತ್ರಿಗಳು ಏರಿ ಬಂದರೂ ನೆನೆಗುದಿಯಿಂದ ಹೊರಬರದ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಇನ್ನಿಲ್ಲದಂತೆ ಕಾಡಹತ್ತಿರುವಾಗ ಮನೆ ಸುಡುತ್ತಿರುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳವ ದೋರಣೆಯ ಜನ ಅಮಾಯಕರನ್ನು ವಂಚಿಸುತ್ತಿರುವ ಬಗ್ಗೆ ಕೇಳಿಬಂದಿದೆ.
ಜ್ಞಾನನೆ ವಲಯಾರಣ್ಯ ವ್ಯಪ್ತಿಯಲ್ಲಿ ವ್ಯಕ್ತಿಯೊಬ್ಬ ಅತಿಕ್ರಮಣದಾರರನ್ನು ಸಂಪರ್ಕಿಸಿ ಅರಣ್ಯ ಅತಿಕ್ರಮಣದಾರರಿಗೆ ಜಾಗ ಮಂಜೂರಿ ಪ್ರಕ್ರಿಯೆ ಇಷ್ಟರಲ್ಲೇ ಆರಂಭವಾಗಲಿದ್ದು ನಿಮಗೆಲ್ಲ ಪಟ್ಟಾ ಕೊಡಿಸುತ್ತೇನೆ ಎಂದು ಪುಸಲಾಯಿಸಿ ಹಲವರಿಂದ 2500 ರೂ. ಪಡೆದುಕೊಂಡ ಬಗ್ಗೆ ಮಾಹಿತಿ ಲಭಿಸಿದೆ.
ಈ ಬಗ್ಗೆ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಲಾಗಿ ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ರೀತಿಯಲ್ಲಿ ಪಟ್ಟಾ ನೀಡುವುದಕ್ಕೆ ಸಂಬAಧಪಟ್ಟು ಆದೇಶ ನಮಗೆ ಬಂದಿಲ್ಲ. ಈ ಕುರಿತಾಗಿ ಯಾರೇ ಅತಿಕ್ರಮಣದಾರರಲ್ಲಿ ಹಣ ಕೇಳಲು ಬಂದರೆ ಹಣ ಕೊಟ್ಟು ಮೋಸ ಹೋಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
Leave a Comment