ಯಲ್ಲಾಪುರ : ಭಾರತದಲ್ಲಿ ಸಾವಿರಾರು ಹಬ್ಬಗಳಿವೆ. ಆದರೆ ಯಾವೂದೇ ಜಾತಿ, ಮತ, ಧರ್ಮವನ್ನು ಲೆಕ್ಕಿಸದೇ ಸಂಪೂರ್ಣ ದೇಶವೇ ಒಂದಾಗಿಸುವ ಹಬ್ಬ ಎಂದರೆ ಈ ಸ್ವಾತಂತ್ರö್ಯ ದಿನಾಚರಣೆ. ಸ್ವಾತಂತ್ರö್ಯಕ್ಕೋಸ್ಕರ ಬಲಿದಾನ ಮಾಡಿದವರಿಗೆ ಎಷ್ಟು ಸ್ಮರಿಸಿದರೂ ಸಾಲದು. ಅದೇ ರೀತಿಯ ದೇಶಭಕ್ತಿಯನ್ನು ಮುಂದಿನ ಪೀಳಿಗೆಯ ಜನರಲ್ಲಿ ಮೂಡಿಸುವಂತಹ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು .
ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಸಿದ ಅವರು ಮಾತನಾಡಿ ೭೫ನೇ ವರ್ಷದ ಸ್ವಾತಂತ್ರö್ಯದ ಅಮೃತ ಮಹೋತ್ಸವವನ್ನು ಇಡೀ ದೇಶವೇ ವಿಜ್ರಂಭಣೆಯಿAದ ಆಚರಿಸಬೇಕಿತ್ತು. ಆದರೆ ಕೋವಿಡ್ ಕಾರಣಾಂತಗಳಿAದ ಕಳೆದೆ ವರ್ಷದಂತೆ ಈ ವರ್ಷವೂ ಸರಳ ರೀತಿಯಲ್ಲಿ ಆಚರಿಸುವಂತಾಗಿರುವದು ಬೇಸರದ ಸಂಗತಿ. ಆದರೂ ನಾವು ಜವಾಬ್ದಾರಿಯುತ ಭಾರತೀಯ ಪ್ರಜೆಗಳಾಗಿ ಕೋವಿಡ್ನ ಬಗ್ಗೆ ಸಂಪೂರ್ಣ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದರು.
ವೀ ಗ್ರಾ ಮತ್ತು ಪಂ ರಾ ಅ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ ಅಮೃತ ಮಹೋತ್ಸವದ ಇಂತಹ ಶುಭ ಸಂದರ್ಭದಲ್ಲಿ ದೇಶಾದ್ಯಂತ ೭೫ ದ್ವೀಪ ಹಾಗೂ ನಡುಗಡ್ಡೆಗಳಲ್ಲಿ ಆಚರಣೆ ಮಾಡುತ್ತಿರುವು ಹೆಮ್ಮೆಯ ಸಂಗತಿ. ಹಾಗೆಯೇ ಕಾಶ್ಮೀರದ ಪ್ರತಿ ಪ್ರದೇಶದಲ್ಲಿ ಇಂದು ರಾಷ್ಟçಧ್ವಜ ಹಾರಿಸುವಂತಾಗಿರುವುದಕ್ಕೆ ಭಾರತೀಯ ಸೈನಿಕರಿಗೆ ಕೃತಜ್ಞತೆ ಗಳನ್ನು ತಿಳಿಸಿದರು.
ಸರ್ಕಾರದ ಆದೇಶದಂತೆ ತಾಲೂಕಾ ಕ್ರೀಡಾಂಗಣದಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಆರಕ್ಷಕ ನಿರೀಕ್ಷಕರಾದ ಸುರೇಶ್ ಯಳ್ಳೂರ್, ಬಿ.ಇ.ಒ. ಎನ್.ಆರ್. ಹೆಗಡೆ, ಲೋಕೋಪಯೋಗಿ ಕಾರ್ಯನಿರ್ವಾಣಾಧಿಕಾರಿ ವೀ. ಎಮ್ ಭಟ್.ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿಕ್ಷಕ ಸಂಜೀವ ಹೊಸ್ಕೇರಿ ನಿರೂಪಿಸಿದರು.
Leave a Comment