ಯಲ್ಲಾಪುರ: ಮಹಿಳೆ ಕುಟುಂಬದಿಂದ ಎಷ್ಟೇ ಸ್ಥಿತಿವಂತರಾಗಿದ್ದರೂ ವೃಥಾ ಕಾಲಹರಣ ಮಾಡದೇ ಸ್ವದ್ಯೋಗದಲ್ಲಿ ತೊಡಗಿಕೊಳ್ಳುವದರಿಂದ ವ್ಯವಹಾರ ಜ್ಷಾನ ಹೆಚ್ಚುತ್ತದೆಯಲ್ಲದೇ ಸದಾ ಕ್ರಿಯಾಶೀಲತೆಯಿಂದಿರಲು ಸಾಧ್ಯವಾಗುತ್ತದೆ.ಕೈಗೆಟುಕುವ ದರದಲ್ಲಿ ಗುಣಮಟ್ಟದ ಬಟ್ಟೆಗಳು ಗ್ರಾಮೀಣ ಭಾಗದಲ್ಲಿಯೂ ಲಭ್ಯವಾಗುವಂತೆ ಮಾಡಿದ ವಿದ್ಯಾಭಟ್ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತಾಗಲಿ ಎಂದು ಸಚಿವ ಶಿವರಾಮ ಹೆಬ್ಬಾರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ ಶುಭ ಹಾರೈಸಿದರು.
ಅವರು ಶುಕ್ರವಾರ ತಾಲೂಕಿನ ಸಹಸ್ರಳ್ಳಿ ಜಮ್ಮೆನಜಡ್ಡಿಯಲ್ಲಿ ವಿದ್ಯಾ ಭಟ್ಟ ಆರಂಭಿಸಿರುವ ಕಪಿಲಾ ಕಲೆಕ್ಷನ್ಸ ಸೆಂಟರ ನ್ನು ಉದ್ಘಾಟಿಸಿ ಮಾತನಾಡಿದರು. ಕಪಿಲಾ ಕಲೆಕ್ಷನ್ಸ ಒಡತಿ ವಿದ್ಯಾಭಟ್ಟ ಮಾತನಾಡಿ ಕೇವಲ ನಗರವಾಸಿಗಳು ,ಉಳ್ಳವರು ಮಾತ್ರ ಬ್ರಾಂಡೆಡ ಬಟ್ಟೆಗಳನ್ನು ಕೊಳ್ಳಲು ಸಾಧ್ಯ ಎಂಬ ಕೀಳರಿಮೆ ಗ್ರಾಮೀಣ ಜನರಲ್ಲಿ ಇದೆ ಅವರು ಅದಕ್ಕಾಗಿ ಪೇಟೆಗೆ ಹೋಗಬೇಕಾಗುತ್ತದೆ ಅದನ್ನು ಹೋಗಲಾಡಿಸಲು ಅವರಿಗೂ ಇಲ್ಲಿಯೇ ಲಭ್ಯವಾಗಲಿ ಎಂಬ ಉದ್ದೇಶದಿಂದ ಕೇವಲ ಲಾಭದೃಷ್ಟಿಯನ್ನುಟ್ಟುಕೊಳ್ಳದೇ ಅಂಗಡಿ ತೆರೆದಿದ್ದೇನೆ. ಇದಕ್ಕೆ ಮಧ್ಯಮವರ್ಗ ,ಗ್ರಾಮೀಣ ಮಹಿಳೆಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ.ಸ್ವಪ್ನಾ ಪಂಡಿತ , ಅನಿತಾ ಹೆಗಡೆ, ಜಯಶ್ರೀ ಕವ್ವಾಳೆ, ಪ್ರಭಾವತಿ ಗೋವಿ ,ಶ್ರೀಧರ ಭಟ್ಟ, ಹಿರಿಯರಾದ ಅಣ್ಣಯ್ಯ ಭಟ್ಟ ,ಶ್ರೀಮತಿ ಭಟ್ಟ ,ಶುಭ ಹಾರೈಸಿದರು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ
ಗ್ರುಪ್ ಸೇರಲು ಈ ಲಿಂಕ್ ಒತ್ತಿ https://chat.whatsapp.com/D0Ry5Povwke1s77ibSLq4A
.
Leave a Comment