ಭಟ್ಕಳ: ಇತ್ತೀಚೆಗೆ ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಶಾಸಕ ಸುನೀಲ ನಾಯ್ಕ ಭೆಟಿ ನೀಡಿ, ಪರಿಶೀಲನೆ ನಡೆಸಿ, ವೈಯಕ್ತಿಕ ಧನಸಹಾಯ ನೀಡಿದರು.
ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾಗಿದ್ದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬದ ತುರ್ತು ನಿರ್ವಹಣೆಗಾಗಿ ತಮ್ಮ ವೈಯಕ್ತಿಯ ಧನ ಸಹಾಯವನ್ನು ನೀಡಿದರು. ಅಲ್ಲದೇ, ಸರಕಾರದಿಂದ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಅಣ್ಣಪ್ಪ ನಾಯ್ಕ, ಈಶ್ವರ ನಾಯ್ಕ, ಪಾಂಡುರಂಗ ನಾಯ್ಕ ಹಾಗೂ ಶ್ರೀಕಾಂತ ನಾಯ್ಕ ಇದ್ದರು.
Leave a Comment