ಹೊನ್ನಾವರ ಪಟ್ಟಣದ ಸೆಂಥ್ ಇಗ್ನೇಷಿಯಸ್ ಆಸ್ಪತ್ರೆ, ಮಾನಸಿಕ ವಿಭಾಗದ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ” “ನನ್ನ ಜೀವನ ಆಶಾದಾಯಕವೋ ಅಥವಾ ನಿರಾಶಾದಾಯಕ?” ಎಂಬ ವಿಷಯದಲ್ಲಿ,ಪ್ರಬಂಧ ಸ್ಪರ್ಧೆ ಎರ್ಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 18 ರಿಂದ 30 ವರ್ಷದ ವಯೋಮಿತಿಯವರು ಕನ್ನಡ ಇಲ್ಲವೇ ಇಂಗ್ಲೀಷ ಭಾಷೆಯ, ಒಂದು ಸಾವಿರ ಪದಗಳು ಮೀರದಂತೆ ಎ4 ಗಾತ್ರದ ಕಾಗದದ ಮೇಲೆ ಸ್ವವಿಳಾಸ, ಆಧಾರ ಪ್ರತಿ, ಭಾವಚಿತ್ರ, ದೂರವಾಣಿ ಸಂಖ್ಯೆಯೊಂದಿಗೆ ಸೆಪ್ಟೆಂಬರ್ 30ರ ಒಳಗೆ ಕಳಹಿಸಬಹುದು.
ಪ್ರಥಮ ವಿಜೇತರಿಗೆ 3,000/-, ದ್ವೀತಿಯ 2,000/-, ತೃತೀಯ 1,000/- ಬಹುಮಾನವನ್ನು ನೀಡಲಾಗುವುದು. ಪ್ರಬಂಧವನ್ನು ಇ-ಮೇಲ್ ಮೂಲಕ [email protected] ಅಥವಾ ವಾಟ್ಸಾಪ್ ನಂಬರ್ 9980813356 ಇಲ್ಲವೇ ವೈಯಕ್ತಿಕವಾಗಿ ಪ್ರಬಂಧ ಸ್ಪರ್ಧೆ, ಮನೋರೋಗ ವಿಭಾಗ, ಸಂತ ಇಗ್ನೇಷಿಯಸ್ ಆಸ್ಪತ್ರೆ, ಪ್ರಭಾತನಗರ ಹೊನ್ನಾವರ. ಈ ವಿಳಾಸಕ್ಕೆ ತಲುಪಿಸಿ. ಹೆಚ್ಚಿನ ಮಾಹಿತಿಗಾಗಿ ಗಣೇಶ ಗೌಡ, ಆಪ್ತಸಮಾಲೋಚಕರು, ಮಾನಸಿಕ ವಿಭಾಗಕ್ಕೆ ಸಂಪರ್ಕಿಸಬಹುದು “ಈ ಪ್ರಬಂಧ ಸ್ಪರ್ಧೆ ಹಲವಾರು ಜೀವಕ್ಕೆ ಸ್ಪೂರ್ತಿಯಾಗಲಿ”. ಎಂದು ಸಂತ ಇಗ್ನೇಷಿಯಸ್ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment