ಎಮ್.ಪಿ.ಇ ಸೊಸೈಟಿಯ ಡಾ||ಎಮ್.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ನಲ್ಲಿ ನಡೆಯುತ್ತಿರುವ ಜೆಇಇ ಪರೀಕ್ಷೆಯಲ್ಲಿ ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು2020-21 ನೇ ಸಾಲಿನಲ್ಲಿ ನಡೆದ ಜೆ.ಇ.ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಹೊನ್ನಾವರ ತಾಲೂಕಿನ ಕುಳಕೋಡಿನವನಾದ ಕುಮಾರ.ಧನ್ಯ ವೆಂಕಟ್ರಮಣ ಹೆಗಡೆ ಹಾಗೂ ಹೊನ್ನಾವರ ತಾಲೂಕಿನ ಕರ್ಕಿಯವಳಾದ ಕುಮಾರಿ. ರಜಿತಾ.ಮಂಜುನಾಥ್.ಪಡ್ತಿ ಇವಳು ಉತ್ತಮ ಅಂಕಗಳೊಂದಿಗೆ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದಿರುತ್ತಾರೆ.
ಇವರ ಈ ಸಾಧನೆಗೆ ಎಂ.ಪಿ.ಇ ಸೊಸೈಟಿ ಆಡಳಿತ ಮಂಡಳಿ, ಡಾ||ಎಮ್.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ , ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದದವರು ಶುಭವನ್ನು ಹಾರೈಸಿ, ಇವರ ಮುಂದಿನ ಶಿಕ್ಷಣ ಉಜ್ವಲವಾಗಿರಲಿ ಎಂದು ಶುಭಾಶಯವನ್ನು ಕೋರಿದ್ದಾರೆ.
Leave a Comment