• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಾಸ್ತ್ರೀಯ ಕಲೆ ಯಕ್ಷಗಾನದ ಶ್ರೀಮಂತಿಕೆಗೆ ಭೂಮಿಕೆ ಸಿದ್ಧವಾಗಬೇಕಾಗಿದೆ- ಶಾಸಕ ಶ್ರೀ ಸುನೀಲ್ ನಾಯ್ಕ್

September 21, 2021 by Vishwanath Shetty Leave a Comment

ಬಹು ಆಯಾಮದ ಶಾಸ್ತ್ರೀಯ ಕಲೆ ಯಕ್ಷಗಾನಕ್ಕೆ ದಕ್ಷಿಣೋತ್ತರ ಜಿಲ್ಲೆಗಳ ಕಲಾವಿದರ ಕೊಡುಗೆಗಳನ್ನು ಶ್ಲಾಘಿಸುತ್ತಾ, ಯಕ್ಷಗಾನದಲ್ಲಿ ಹಳೆಯ ಪರಂಪರೆಗಳು, ಚಿಂತನೆಗಳು ಮಾಯವಾಗುತ್ತಿರುವ ಬಗ್ಗೆ ಹೊನ್ನಾವರ-ಭಟ್ಕಳ ಶಾಸಕರಾದ ಶ್ರೀ ಸುನೀಲ್ ನಾಯ್ಕ್ ಬೇಸರ ವ್ಯಕ್ತಪಡಿಸಿದರು.

ಅವರು ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಕೆರೆಮನೆ ಮಹಾಬಲ ಹೆಗಡೆ ಮತ್ತು ಕೆರೆಮನೆ ರಾಮ ಹೆಗಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಮಾನ್ಯನಿಂದ ವಿದ್ವಜ್ಜನರ ಸಲಹೆ, ಸೂಚನೆಗಳೊಂದಿಗೆ ಯಕ್ಷಗಾನಕ್ಕೆ ಜೀವ ತುಂಬುವ ಯೋಜನೆಯೊಂದಿಗೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.


ಶ್ರೀ ರಾಮ ಹೆಗಡೆ ಮತ್ತು ಶ್ರೀಮತಿ ನಾಗವೇಣಿ ಹೆಗಡೆ ಕೆರೆಮನೆ ಇವರ ಭಾಗವತಿಕೆಯಲ್ಲಿ ರಾಗಗಳ ಪರಿಚಯದೊಂದಿಗೆ ಯಕ್ಷಗಾನ ಹಾಡುಗಳ ಧ್ವನಿ ಮುದ್ರಣವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಎಚ್. ಎಸ್. ಶಿವರುದ್ರಪ್ಪನವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಗಮಕಗಳ ಹಿನ್ನೆಲೆಯುಳ್ಳ ಈ ಅಪರೂಪದ ಯಕ್ಷಗಾನ ರಾಗಗಳ ಪರಿಚಯ ಉಳಿಸಿ, ಬೆಳೆಸುವುದರಲ್ಲಿ ಸಹಕಾರಿಯಾಗಿದೆ ಎಂದರು.

  • IMG 20210919 WA0023
  • IMG 20210919 WA0016

ಮುಂದಿನ ತಲೆಮಾರಿನ ಯಕ್ಷಗಾನ ಕಲಾವಿದರಿಗೆ ಸಹಕಾರಿಯಾಗಲು ಈ ರಾಗಗಳನ್ನು ಅಕಾಡೆಮಿಯಲ್ಲಿ ದಾಖಲೀಕರಿಸಿಕೊಳ್ಳುತ್ತೇನೆಂದರು. ಹೆಸರಾಂತ ವಿದ್ವಾಂಸ ಶ್ರೀ ಗುರುರಾಜ್ ಮಾರ್ಪಳ್ಳಿಯವರು ಮಾತನಾಡಿ ಸ್ಪಷ್ಟವಾದ ಭಾವ ಉಚ್ಚಾರದೊಂದಿಗೆ ಸ್ವರ, ರಾಗ, ಶೃತಿ ಬದ್ಧವಾಗಿ ಹಾಡಿ ಗಾನ ಗಂಧರ್ವರಾಗುವ ಸಾಮರ್ಥ್ಯ ಶ್ರೀ ರಾಮ ಹೆಗಡೆಯವರಿಗೆ ಇತ್ತು ಎಂದು ಅಭಿಪ್ರಾಯಪಟ್ಟರು.


ಡಾ. ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿಯನ್ನು ಮರಣೋತ್ತರವಾಗಿ ಹಡಿನಬಾಳ ಶ್ರೀಪಾದ ಹೆಗಡೆಯವರಿಗೆ ನೀಡಲಾಯಿತು. ಇದನ್ನು ಅವರ ಪುತ್ರ ಶ್ರೀಶ ಹೆಗಡೆ ಸ್ವೀಕರಿಸಿದರು. ಹಡಿನಬಾಳಾ ಶ್ರೀಪಾದ ಹೆಗಡೆಯವರ ಒಡನಾಡಿಯಾದ ಶ್ರೀ ಕೃಷ್ಣ ಯಾಜಿ ಬಳಕೂರ ಇವರು ಅಭಿನಂದನಾ ನುಡಿಗೈದರು. ಶ್ರೀ ಎನ್. ಜಿ. ಭಟ್, ಮಾಳ್ಕೋಡ ಸನ್ಮಾನ ಪತ್ರ ವಾಚಿಸಿದರು.
ಇದೇ ಸಂದರ್ಭದಲ್ಲಿ ‘ಬಹುಬಲ’ ರಾಮ ಹೆಗಡೆ ನೆನಪಿನ ಹೊತ್ತಿಗೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಪುಸ್ತಕ ಪರಿಚಯಿಸಿದ ಪ್ರಾಧ್ಯಾಪಕ ನಾಗರಾಜ ಹೆಗಡೆ ಅಪಗಾಲರವರು ಮಾತನಾಡುತ್ತಾ ಕುಟುಂಬ ವತ್ಸಲನಾಗಿ, ಜೀವನ ಪ್ರೇಮಿಯಾಗಿ, ಶಿಷ್ಯಾನುರಾಗಿಯಾಗಿ, ಶೋಧನೆಯಲ್ಲಿ ಸದಾ ತನ್ನನ್ನು ತನ್ಮಯತೆಯಿಂದ ತೊಡಗಿಸಿಕೊಳ್ಳುತ್ತಾ ಇರುವ ರಾಮ ಹೆಗಡೆಯವರು ನಿಜಕ್ಕೂ ‘ಬಹುರಾಮ’ರೇ ಆಗಿ ‘ಬಹುಬಲ’ರಾಗಿದ್ದರು ಎಂದರು.

  • IMG 20210919 WA0014
  • IMG 20210919 WA0033


‘ಬಹುಬಲ’ ಹೊತ್ತಗೆಯ ಮುಖ್ಯ ಸಂಪಾದಕರಾದ ಡಾ. ಶ್ರೀಪಾದ ಶೆಟ್ಟಿಯವರು ಮಾತನಾಡುತ್ತಾ ಕೆರೆಮನೆಯ ಯಕ್ಷಗಾನ ಪರಂಪರೆಗೆ ರಾಮ ಹೆಗಡೆಯವರು ಶಕ್ತ ಪ್ರತಿನಿಧಿಯಾಗಿ ತಮ್ಮದೇ ಆದ ಪ್ರತಿಭೆ, ಪರಿಣಿತಿ, ಕಲಾಭಿಜ್ಞತೆಯಿಂದ ಯಕ್ಷಗಾನ ಕಲೆಗೆ ಹೆಸರನ್ನು ತಂದುಕೊಟ್ಟವರು ಎಂದರು.
ಮುಖ್ಯ ಅತಿಥಿಗಳಾಗಿ ಅಕಾಡೆಮಿಯ ಸದಸ್ಯರಾದ ಶ್ರೀಮತಿ ನಿರ್ಮಲಾ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗಂಗಾಧರ ಗೌಡ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಹೆಸರಾಂತ ವಿದ್ವಾಂಸ, ವಾಗ್ಮೀ, ಮೇಲುಕೋಟೆ ಸಂಸ್ಕೃತ ವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾಗಿರುವ ಶ್ರೀ ವಿ. ಉಮಾಕಾಂತ ಭಟ್ಟರು ಮಾತನಾಡಿ ಸಂಗೀತ, ಸಾಹಿತ್ಯ ಮತ್ತು ರಸಸ್ವಾದದಲ್ಲಿ ಸಾಧನೆ ಮಾಡಿ, ಕೆರೆಮನೆಯನ್ನು ಗುರುಮನೆಯನ್ನಾಗಿ ಮಾಡಿದ ಡಾ. ಮಹಾಬಲ ಹೆಗಡೆ ಅವರ ಮಗ ದಿವಂಗತ ರಾಮ ಹೆಗಡೆ ಹುಟ್ಟಿದಲ್ಲಿಯೇ ಅರಳಿ ತನ್ನ ಕಂಪು-ಕೆಂಪುಗಳನ್ನು ಹರಡಿ ಸೂರ್ಯನಿಗೆ ಮುಖ ಮಾಡಿ ನಿಂತ ಕೆರೆಮನೆ ಕಮಲ ಎಂದು ಅಭಿಪ್ರಾಯಪಟ್ಟರು. ಈ ನೆಲದಿಂದ ನೆಲೆಯಿಂದ ಯಕ್ಷಗಾನಕ್ಕೆ ಬೆಲೆ ಬರಲಿ ಎಂದರು.


ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಯಕ್ಷ ಚೇತನಗಳಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿಯನ್ನು ಶ್ರೀ ಗಣೇಶ ಯಾಜಿಯವರು ಹಾಡಿದರು. ಶ್ರೀ ಶಶಾಂಕ ಹೆಗಡೆ ಸರ್ವರನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀಮತಿ ನಾಗವೇಣಿ ಹೆಗಡೆ ಆಶಯ ನುಡಿ ವ್ಯಕ್ತಪಡಿಸಿದರು. ಶ್ರೀ ಕಿಶೋರ ಹೆಗಡೆ ವಂದಿಸಿದರು. ಶ್ರೀ ಎಲ್. ಎಂ. ಹೆಗಡೆ, ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ನಂತರ ಪಂಡಿತ ಶ್ರೀ ಪರಮೇಶ್ವರ ಹೆಗಡೆ, ಕಲ್ಭಾಗ ಇವರಿಂದ ಶಾಸ್ತ್ರೀಯ ಸಂಗೀತ ಏರ್ಪಟ್ಟಿತು. ಶ್ರೀ ಶ್ರೀಧರ ಹೆಗಡೆ ಕಲ್ಭಾಗ, ಶ್ರೀ ಗೋಪು ಹೆಗಡೆ ಕಲ್ಭಾಗ ಮತು ಶ್ರೀ ಗೌರೀಶ ಯಾಜಿ ಸಾಥ್ ನೀಡಿದರು.
ಡಾ. ಮಹಾಬಲ ಹೆಗಡೆ ಮೊಮ್ಮಕ್ಕಳಾದ ಶ್ರೀ ಶಶಾಂಕ ಹೆಗಡೆ ಮತ್ತು ಶ್ರೀ ಕಿಶೋರ ಹೆಗಡೆಯವರು ಗೆಜ್ಜೆ ಕಟ್ಟಿ, ಶಾಸ್ತ್ರೀಯ ಹೆಜ್ಜೆಗಳೊಂದಿಗೆ ಬಬ್ರುವಾಹನ ಕಾಳಗ ಪ್ರಸಂಗವನ್ನು ಇತರ ಸಹ ಕಲಾವಿದರೊಂದಿಗೆ ಪ್ರದರ್ಶಿಸಿ ಹೊಸ ಮನ್ವಂತರದ ಅರಳುವ ಪ್ರತಿಭೆಗಳಾಗಿ ಕಂಡರು.

ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾದಿನದ ಅಂಗವಾಗಿ ಕಾಸರಕೋಡ ಟೊಂಕ ಸಮುದ್ರ ತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ಮೀನುಗಾರರು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Keremane Mahabala Hegde Samsaran, ಗುಣವಂತೆಯ ಕೆರೆಮ, ಧ್ವನಿ ಮುದ್ರಣವನ್ನು ಕರ್ನಾಟಕ, ಬಹುಬಲ, ಬಹುರಾಮ'ರೇ ಆಗಿ, ಮೇಲುಕೋಟೆ ಸಂಸ್ಕೃತ ವಿದ್ಯಾಲಯದ ನಿವೃತ್ತ, ಯಕ್ಷಗಾನ ಅಕಾಡೆಮಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...