ಗೋಕರ್ಣ : ಕ್ಷಲ್ಲಕ ಕಾರಣಕ್ಕೆ ವೃದ್ಧನೋರ್ವನ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತದಡಿಯಲ್ಲಿ ನಡೆದಿದೆ. ವಿವೇಕಾನಂದ ಶಾನಭಾಗ್ (70) ಮೃತ ವ್ಯಕ್ತಿಯಗಿದ್ದು. ಓರಿಸ್ಸಾ ಮೂಲದ ಆಕಾಶ್ ಕೊಲೆ ಮಾಡಿದ ಅರೋಪಿಯಾಗಿದ್ದಾನೆ.
ತದಡಿ ಬಂದರು ಸಮೀಪದಲ್ಲೇ ಕೊಲೆಯಾದ ವೈದ್ಧ ವಿವೇಕಾನಂದ ಶಾನಭಾಗ್ ಮನೆಯಿದ. ಪ್ರತಿದಿನ ಬೆಳಿಗ್ಗೆಯೇ ಬೇಗ ಏಳುವ ಅಭ್ಯಾಸವನ್ನ ವೃದ್ಧ ರೂಡಿಸಿಕೊಂಡಿದ್ದರು. ಪುತ್ರಿ ರಜಲಕ್ಷಿ ಎನ್ನುವವರ ಜೊತೆ ಮನೆಯಲ್ಲಿ ವಿವೇಕಾನಂದ ಜೀವನ ಸಾಗಿಸುತ್ತಿದ್ದು. ಶುಕ್ರವಾರ ಸಂಕಷ್ಟಿ ಹಿನ್ನಲೆಯಲ್ಲಿ ಬೆಳಿಗ್ಗೆಯೇ 5 ಗಂಟಗೆ ಪುತ್ರಿ ಹಗೂ ವಿವೇಕಾನಂದ ಎದ್ದು ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಇನ್ನು ಪುತ್ರಿ ರಾಜಲಕ್ಷಿ ಬಟ್ಟೆ ತೊಳೆಯುವಾಗ ಕುಡಿತದ ಅಮಲಿನಲ್ಲಿದ್ದ ಅರೋಪಿ ಅಕಾಶ್ ಮನೆಯ ಕಂಪೌಡ್ ಹಾರಿ ಒಳ ಬಂದು ನೋಡುತ್ತಾ ನಿಂತಿದ್ದು, ಇದನ್ನ ರಜಲಕ್ಷಿ ಗಮನಿಸಿ ಯರೆಂದು ವಿಚಾರಿಸಲು ಹೊದಾಗ ಮನೆಯ ಮೇಲೆ ಓಡಿ ಹೋಗಿದ್ದನಂತೆ ವಿಷಯವನ್ನ ತಂದೆಗೆ ತಿಳಿಸಿದಾಗ ಮನೆಯ ಮೇಲೆ ಯರು ಹೋಗಿದ್ದಾರೆಂದು ನೋಡಲು ತೆರೆಳಿದ್ದಾರೆ.
ವಿಷಯವನ್ನ ಬೇರೆಯವರಿಗೆ ತಿಳಿಸುತ್ತಾರೆ ಎಂದು ಹೆದರಿ ಕುಡಿತದಮಲಿನಲ್ಲಿ ರಾಡ್ ಒಂದನ್ನ ತೆಗೆದುಕೊಂಡು ವಿವೇಕಾನಂದರ ಮೇಲೆ ಅರೋಪಿ ಹಲ್ಲೆ ಮಡಿದ್ದು ಗಾಯಗೊಂಡ ಅವರನ್ನ ಕುಮಟಾ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಇನ್ನು ಆಕಾಶ್ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು. ಸ್ಥಳೀಯ ಮೀನುಗಾರರ ಸಹಾಯದಿಂದ ಗೋಕರ್ಣ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪಿ ಎಸ್ ಐ ನವೀನ್ ನಯ್ಕ ನೇತೃತ್ವದಲ್ಲಿ ವಿಚಾರಣೆಯನ್ನನಡೆಸಲಾಗಿದೆ.
Leave a Comment