ಶಿವಮ್ಗೊಗ ಜಿಲ್ಲೆ ಸಾಗರ ತಾಲೂಕೀನ ಜೋಗ ಬಸ್ ನಿಲ್ದಾಣ ಹತ್ತಿರದ ಲಾಡ್ಜ್ವೊಂದರಲ್ಲಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಮೂಲದ ಇಬ್ಬರು ಗೆಳೆಯರು ನೇಣಿಗೆ ಶರಣಾದ ಘಡನೆ ನಡೆದಿದೆ.
ಬನಹಟ್ಟಿ ಗ್ರಾಮದ ಸಂತೋಷ ಅಡವಿನ್ನವರ (23) ಹಾಗೂ ಹನುಮಂತ ಅಲಗೂರ (28) ಎಂಬಾತರೇ ಜೀವತೆತ್ತ ಯುವಕರಾಗಿದ್ದಾರೆ. ಇಬ್ಬರೂ ಸೆ. 24ರ ತಡರಾತ್ರಿ ಲಾಡ್ಜ್ಗೆ ಬಂದು ರೂಮ್ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನನ ಇಬ್ಬರೂ ಹೊರಗೆ ಒಂದು ಊಟ ತೆಗೆದುಕೊಂಡು ಹೋಗಿ ರೂಮ್ ಸೇರಿಕೊಂಡಿದ್ದರು. ಶನಿವಾರ ರಾತ್ರಿ 8:30 ರ ಹೊತಿಗೆ ರೂಮ್ಬಾಯ್ ಊಟ ಬೇಕೆಂದು ಕೇಳು ಬಾಗಿಲು ತಟ್ಟಿದಾಗ ಇಬ್ಬರು ಹೊರಗೆ ಬರಲಿಲ್ಲ.
ಇಬ್ಬರೂ ಮಲಗಿರಬೇಕೆಂದು ತಿಳಿದು ರೂಮ್ಬಾಯ್ ವಾಪಸ್ ಹೋಗಿದ್ದಾನೆ. ಭಾನುವಾರ ಬೆಳ್ಳಿಗೆ ರೂಮಿನ ಬಾಗಿಲು ಸಾಕಷ್ಟು ಬಾರಿ ಬಡಿದಾಗಲೂ ಬಾಗಿಲು ತೆರೆಯಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ರೊಮೀನ ಬಾಗಿಲು ಒಡೆದು ನೋಡಿದಾಗ ಇಬ್ಬರೂ ರೊಮಿನ ಸೀಲಿಂಗ್ಗ ಅಳವಡಿಸಿದ್ದ ಎರಡು ಫ್ಯಾನ್ಯ್ಗಳಿಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ಜೋಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದ್ದು, ಸಾವಿನ ಕಾರಣ ತಿಳಿದು ಬಂದಿಲ್ಲ.
Leave a Comment