ಹೊನ್ನಾವರ; ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಯವರ ಮುಂದಾಳತ್ವದಲ್ಲಿ ನಡೆಯುವ ಹೋರಾಟಕ್ಕೆ ಹೊನ್ನಾವರ ತಾಲೂಕಿನ ಕೆಕ್ಕಾರ ಹಾಲಕ್ಕಿ ಯುವ ಜಾಗೃತ ಸಂಘದಿಂದ ನೈತಿಕ ಬೆಂಬಲಾರ್ಥವಾಗಿ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಹಾಗೂ ಜಿಲ್ಲಾ ಅಧ್ಯಕ್ಷ ಹನುಮಂತ ಗೌಡರನ್ನು ಬುಧವಾರ ಭೇಟಿಯಾದರು.
ಸುಕ್ರಜ್ಜಿ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟದಲ್ಲಿ ನಾವು ನಿಮ್ಮ ಜೊತೆಗಿದ್ದೇವೆ ಎಂದು ಸಂಘದ ಪ್ರಮುಖರು ನೈತಿಕ ಬಲ ತುಂಬಿದರು. ಈ ಹೋರಾಟಕ್ಕೆ ಎಲ್ಲಾ ಯುವ ಬಾಂಧವರು ಯಾವುದೇ ಸಂದರ್ಭದಲ್ಲೂ ಜೊತೆಗಿದ್ದು ಸಮಾಜವನ್ನು ಎಸ್, ಟಿ ಗೆ ಸೇರಿಸುವ ಹೋರಾಟಕ್ಕೆ ಬೆನ್ನಲುಬಾಗಿ ಇರುತ್ತೇವೆ ಎಂದರು. ಸುಕ್ರಜ್ಜಿಯ ಸಲಹೆ, ಸೂಚನೆ, ಮಾರ್ಗದರ್ಶನವನ್ನು ಪಡೆದು ಮುಂದಿನ ಹೋರಾಟದ ರೂಪುರೆಷೇಗಳ ಚರ್ಚೆ ಮಾಡಿದರು.
ಈ ಸಂದರ್ಭದಲ್ಲಿ ಹಾಲಕ್ಕಿ ಯುವ ಜಾಗೃತ ಸಂಘದ ಅಧ್ಯಕ್ಷರಾದ ಶುಕ್ರು ಗೌಡ, ಶ್ರೀಧರ ಗೌಡ, ಗೌರೀಶ್ ಗೌಡ, ಕೃಷ್ಣ ಗೌಡ ಮತ್ತು ಸಂಘದ ಸದಸ್ಯರು ಹಾಜರಿದ್ದರು.
Leave a Comment