ಯಲ್ಲಾಪುರ : ಇತ್ತೀಚೆಗೆ ಅತಿವೃಷ್ಟಿಯಿಂದ ತಾಲೂಕಿನ ಕಳೆಚೆಯಲ್ಲಿ ದುರಂತ ನಡೆದು ೩-೪ ತಿಂಗಳುಗಳೇ ಕಳೆದಿವೆ. ಸರ್ಕಾರದಿಂದ ಕೋಟ್ಯಾಂತರ ರೂ ಪರಿಹಾರಧನ ಮಂಜೂರಾಗಿದೆ ಎಂದು ಬಿಜೆಪಿ ಯವರು ಹೇಳಿಕೆ ನೀಡುತ್ತಾರೆ. ಆದರೆ ಇನ್ನುವರೆಗೂ ಅಲ್ಲಿನ ಜನತೆಯ ಜೀವನ,ಪರ್ಯಾಯ ವ್ಯವಸ್ಥೆ ಕುರಿತು ಒಂದು ಸರಿಯಾದ ನೀಲ ನಕ್ಷೆಯನ್ನೂ ಸಿದ್ಧಪಡಿಸದ ಬಿಜೆಪಿ ಸರಕಾರಕ್ಕೆ ಮತ ಕೇಳುವ ನೈತಿಕತೆ ಇಲ್ಲ .ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ. ದೇಶಪಾಂಡೆ . ಹೇಳಿದರು
ಅವರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಪರಿಷತ್ ಚುನಾವಣೆ ಅಂಗವಾಗಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತಯಾಚಿಸಿ ಮಾತನಾಡಿ ತಮ್ಮದೇ ಸರಕಾರವಿರುವದರಿಂದÀ ಪಿಡಿಒಗಳ ಮೂಲಕ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಗ್ರಾಪಂ ಸದಸ್ಯರ ಮೇಲೆ ದಬ್ಬಾಳಿಕೆ ಮಾಡುವ ಕಾರ್ಯ ನಡೆಯುತ್ತಿದೆ
ಆರೋಪಿಸಿದರಲ್ಲದೇ ಕಾಂಗ್ರೆಸ್ ಸರ್ಕಾರದ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂದು ಹೇಳುವದನ್ನು ಬಿಟ್ಟು ಬೇರೇನನ್ನೂ ಮಾಡದ ಬಿಜೆಪಿ ,ಬೆಲೆ ಏರಿಕೆಯಿಂದ ಜನ ತತ್ತರಿಸುವಂತೆ ಮಾಡಿದ್ದಾರೆ ಇದರಿಂದ ಬೇಸತ್ತ ಜನತೆ ಈ ಬಾರಿ ನಮ್ಮ ಜೊತೆಗಿದ್ದಾರೆ ಎಂದರು. ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿದರು .
. ಇದೇ ಸಂದರ್ಭದಲ್ಲಿ ಪ್ರಮುಖರಾದ ಎನ್.ಎಮ್. ಹೆಬ್ಬಾರ್ ಸೇರಿದಂತೆ, ಉಚ್ಚಗೇರಿ ಪ್ರಾಂತ್ಯದ ಬಿ.ಜೆ.ಪಿ. ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಬರಮಾಡಿಕೊಳ್ಳಲಾಯಿತು.ವೇದಿಕೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಪ್ರಶಾಂತ ದೇಶಪಾಂಡೆ, ವಿಧಾನ ಪರಿಷತ್ ಚುನಾವಣಾ ವೀಕ್ಷಕರಾದ ಗಾಯತ್ರಿ ನೇತೇಕರ್, ಆರ್.ಪಿ.ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್ ಗಾಂವರ್, ಪಕ್ಷದ ಪ್ರಮುಖರಾದ ಡಾ.ಕುಬೇರಪ್ಪ, ಬಸವರಾಜ ದೊಡ್ಮನಿ ಉಪಸ್ಥಿತರಿದ್ದರು.
ಉಲ್ಲಾಸ ಶಾನಭಾಗ ಸ್ವಾಗತಿಸಿದರು, ಪ್ರಶಾಂತ ಸಭಾಹಿತ ನಿರ್ವಹಿಸಿದರು. ಅನಿಲ್ ಮರಾಠೆ
ವಂದಿಸಿದರು. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಪ್ರಮುಖರು ಇದ್ದರು.
Leave a Comment