ಬೆಂಗಳೂರು : ಕಳೆದು ತಿಂಗಳು ದಿಡೀರ್ ಏರಿಕೆ ಮಾಡಲಾಗಿದ್ದೆ ಕೃಷಿ ಜಮೀನು ಸರ್ವೆ ಶುಲ್ಕವನ್ನು ಶೇ. 50 ರಷ್ಟು ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ಸರ್ವೆ ನಂಬರ್ ಗೆ 35 ರೂ. ಇದ್ದ ಸರ್ವೆ ಶುಲ್ಕವನ್ನು ರಾಜ್ಯ ಸರ್ಕಾರ 2021ರ ನವೆಂಬರ್ ನಲ್ಲಿ ಏಕಾಏಕಿ ನೂರಾರು ಪಟ್ಟು ಹೆಚ್ಚಳ ಮಾಡಿತ್ತು. ಇದು ಕೊರೊನಾ ಮತ್ತುಇ ಬೆಳೆ ನಷ್ಟಗಳಿಂದ ಕಂಗಾಲಗಿದ್ದ ರೈತರಿಗೆ ಇದು ಸಾಕಷ್ಟು ಸಮಸ್ಯೆ ಉಂಟು ಮಾಡಿತ್ತು. ಇತ್ತೀಚೆಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ ಸದಸ್ಯ ದಿನೇಶ ಗೂಳಿ ಗೌಡ ಈ ಬಗ್ಗೆ ಮುಖ್ಯ ಮಂತ್ರಿ ಹಾಗೂ ಕಂದಾಯ ಇಲಾಖೆಯ ಗಮನ ಸೆಳೆದು ಸರ್ವೆ ಶುಲ್ಕದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದ್ದರು.
ಇದರ ಬೆನ್ನಲ್ಲೇ ಸರ್ವೆ ಶುಲ್ಕ ಪರಿಷ್ಕರಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಪರಿಷ್ಕೃತ ಆದೇಶದ ಪ್ರಕಾರ ಹದ್ದು ಬಸ್ತು ಅರ್ಜಿ ಶುಲ್ಕ ಗ್ರಾಮೀಣ ಭಾಗದಲ್ಲಿ ಎರಡು ಎಕರೆವರೆಗೂ 500 ರೂಪಾಯಿ ಹಾಗೂ 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 300 ರೂಪಾಯಿಯಂತೆ ದರ ನಿಗದಿ ಮಾಡಿ ಆದೇಶಿಸಿದೆ.
ಇನ್ನು ನಗರ ಪ್ರದೇಶಗಳಲ್ಲಿ ಮೊದಲ 2 ಎಕರೆವರೆಗೆ 2000 ರೂ. ಇದ್ದು, ನಂರ ಪ್ರತಿ ಎಕರೆಗೆ 400 ರೂ. ನಿಗದಿ ಮಾಡಿ ಕಂದಾಯ ಇಲಾಖೆ (ಭೂಮಾಪನ) ಆದೇಶ ಹೊರಡಿಸಿದೆ. 11 ಇ ನಕ್ಷೆ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತಾತ್ಕಾಲ್ ಪೋಟಿಗೆ ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೂ 1500 ರೂಪಾಯಿ ಹಾಗೂ 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 400 ರೂಪಾಯಿಯಂತೆ ದರ ನಿಗದಿಯಾಗಿದೆ. ನಗರ ಪ್ರದೇಶಗಳಲ್ಲಿ ಮೊದಲ 2 ಎಕರೆವರೆಗೆ 2500 ರೂ. ಇದ್ದು ನಂತರ ಪ್ರತಿ ಎಕರೆಗೆ 1000 ರೂ.ಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.
Leave a Comment