ಕುಮಟಾ : ತಾಲೂಕಿನ ಮೂರೂರಿನ ಮುಸುಗುಪ್ಪ ರಸ್ತೆಯಲ್ಲಿ ಮಟಕಾ ಆಡಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪಿ.ಎಸ್.ಐ., ರವಿ ಗುಡ್ಡಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, 2190 ರೂ. ನಗದು ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಕುಮಟಾ ತಾಲೂಕಿನ ಅಂಗಡಿಕೇರಿಯ ಶ್ರೀಧರ ನಾರಾಯಣ ಕಲಗದ್ದೆ (40) ಬಂಧಿತ ವ್ಯಕ್ತಿ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment