
ಯಲ್ಲಾಪುರ :ಗರ್ಭಿಣಿ ಮಹಿಳೆಯರು ಬಿ. ಪಿ, ಶುಗರ್, ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಕ್ಕೊಳಗಾಗದೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದುಕೊಳ್ಳಬೇಕು ಎಂದು ಪ್ರಸೂತಿ ತಜ್ಞ ಡಾ ದೀಪಕ ವಿ ಭಟ್, ಹೇಳಿದರು.ಅವರು ಪಟ್ಟಣದ ಸರಕಾರಿ ಆಸ್ಪತ್ರೆ ಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಸಮ್ಮಿಲನ ಮೂಲಕ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ದಲ್ಲಿ ಮಾತನಾಡಿ ಕುಟುಂಬ ದವರು ಹುಟ್ಟುವ ಮಗುವಿನ ಬಗ್ಗೆ ಲಿಂಗ ತಾರ ತಮ್ಯ ಮಾಡ ಬಾರದು ಎಂದರಲ್ಲದೆ ಕೆಲಸದಲ್ಲಿ ಶೃದ್ದೆ, ಜೀವನೋತ್ಸಾಹ ದಿಂದ ಇದ್ದರೆ ಇತರರಿಗೆ ಪ್ರೇರಣೆ ಯಾಗಲು ಸಾಧ್ಯ ಎಂದರು.
ಆರೋಗ್ಯ ಅಧಿಕಾರಿ ಡಾ ನರೇಂದ್ರ ಪವಾರ ಮಾತನಾಡಿ ತಾಯಿಯಿಂದ ಮಗುವಿಗೆ HIV ಮತ್ತಿತರ ಸೋಂಕು ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಗಳ ಬಗ್ಗೆ ತಿಳಿಸಿದರು.ನಂದೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ ತೇಜೇಶ್, ನೇತ್ರ ತಜ್ಞರಾದ ಡಾ ಸೌಮ್ಯ ಕೆ.ವಿ, ತಾಲೂಕು ಆಸ್ಪತ್ರೆ ಸಿಬ್ಬಂದಿ ರಾಘವೇಂದ್ರ, ಸಮುದಾಯ ಆರೋಗ್ಯ ಅಧಿಕಾರಿಗಳು, ಎ.ಎನ್. ಎಮ್ ಹಾಗೂ ಇತರ ಆರೋಗ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಅರಿವು ನೀಡುವದರ ಜೊತೆಗೆ ಹೂವು,ಹಣ್ಣು, ಕುಂಕುಮ ಬಾಗಿನ ನೀಡಿ ಮಡಿಲು ತುಂಬುವ ಸಂಪ್ರದಾಯ ನೆರವೇರಿಸಲಾಯಿತು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ ; Yellapur news ; Join our whatsapp group

Leave a Comment