ಹೊನ್ನಾವರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಪಟ್ಟಣದ ರಾಯಲಕೇರಿಯ ನಿವಾಸಿ ಗಳಾದ ಸಚಿನ ನಾಯ್ಕ, ಗಣೇಶ ಬಾಳ೦ಬಿಡ ಹಾಗೂ ಇಡಗುಂಜಿ ಹಾಮಕ್ಕಿಯ ನಿವಾಸಿ ಮನೋಜ ನಾಯ್ಕ, ಇವರು ಚಂದ್ರಾಣಿ ಅರಸಾಮಿ ಕೆರೆಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ರವಿವಾರ ಬಿಯರ್ ಸಾರಾಯಿ ಕುಡಿದಿದ್ದರು.
ಅದೇ ರೀತಿ ಕುಳಕೋಡ ಹತ್ತಿರವು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ಗಳು ಸರಾಯಿ ನಶೆಯಲ್ಲಿದ್ದರು. ಪಟ್ಟಣದ ಉದ್ಯಮನಗರ ನಿವಾಸಿ ಮಹೇಶ ಮೇಸ್ತಾ, ಮೂಲತ ಶಿವಮೊಗ್ಗ ಸಾಗರ ನಿವಾಸಿಯಾದ ಹಾಲಿ ಪಟ್ಟಣದ ತಗ್ಗುಪಾಳ್ಯ ನಿವಾಸಿ ಜಾನರಾಜ್ ಜೋಸೆಫ್ ಅವರು ಪೊಲೀಸರು ನಡೆಸಿ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಆರೋಪಿತರ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment