ಕಲಬುರಗಿ: ಫಾರ್ಮಸಿ ಕಾಲೇಜುಗಳ ಪರಿವೀಕ್ಷಣೆ ಇನ್ಸ್ಪೆಕ್ಟರ್ ನೇಮಕಕ್ಕೆ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನಗೊಂಡ ಇಲ್ಲಿಯ ಎಚ್ಕೆಇ ಫಾರ್ಮಸಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಶಾಂತವೀರ ಸಲಗಾರ ಎನ್ನುವವರು ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಬೆಕನಾಳರ ಮೇಲೆ ಆಸಿಡ್ ಎರಚಲು ಪ್ರಯತ್ನಿಸಿದ ಘಟನೆ ನಡೆದಿದೆ.
ಇದರಿಂದ ಪ್ರಾಚಾರ್ಯರು ಪಾರಾಗಿದ್ದು ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಈ ಕುರಿತಂತೆ ಪ್ರಾಚಾರ್ಯ ಅರುಣಕುಮಾರ ಬ್ರಹ್ಮಪುರ ಠಾಣೆಗೆ ದೂರು ಸಲ್ಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಸಹಾಯಕ ಪ್ರಾಧ್ಯಾಪಕ ಶಾಂತವೀರ ಸಲಗರ ನಾಪತ್ತೆಯಾಗಿದ್ದಾರೆ. ಪ್ರಕರಣ ಕುರಿತಂತೆ ನಾಲ್ಕನೇ ಹೆಚ್ಚುವರಿ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ವಿವರಗಳನ್ನು ಸಲ್ಲಿಸಲಾಗಿದೆ.
Leave a Comment