ದಾಂಡೇಲಿ:
ಮುಂಡಗೋಡದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಎ.ಎಚ್. ಡೊಡ್ಮನಿಯವರ ನಿಧನಕ್ಕೆ ಹಳಿಯಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎನ್. ವಾಸರೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಆದರ್ಶ ಶಿಕ್ಷಕರಾಗಿದ್ದ ಅವರು ಸಾಹಿತ್ಯದ ಮೂಲಕವೂ ಮುಂಡಗೋಡದ ಮನೆ ಮಾತಾಗಿದ್ದರು. ಇವರು ಡಾ. ಛಬ್ಬಿಯವರು ಕಸಾಪ ಆದ್ಯಕ್ಷರಿದ್ದ ಸಂದರ್ಭದಲ್ಲಿ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದರು. ನಿಜಕ್ಕೂ ಇವರ ಅಗಲುವಿಕೆಯಿಂದ ಮುಂಡಗೋಡದ ಅಕ್ಷರ ಕ್ಷೇತ್ರಕ್ಕೆ ತುಂಬಲಾರದಷ್ಟು ಹಾನಿಯಾದಂತಾಗಿದೆ ಎಂದಿದ್ದಾರೆ.
ಹಿರಿಯ ಸಾಹಿತಿಗಳಾದ ಅಳಗುಂಡಿ ಅಂದಾನಯ್ಯ, ದುಂಡಪ್ಪ ಗೂಳೂರ, ಮುರ್ತುಜಾ ಹುಸೇನ ಆನೆಹೊಸೂರ, ಜೋಯಿಡಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ಎಸ್. ಕುರ್ಡೇಕರ, ನಿವೃತ್ತ ಪ್ರಾಚಾರ್ಯ ಯು.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಎಮ್.ಎಸ್. ಲಮಾಣ , ಸಮಾಜ ಸೇವಕ ಐ.ಪಿ. ಘಟಾಂಬಳೆ ಇವರೆಲ್ಲರೂ ತಮ್ಮ ಹಾಗೂ ದೊಡ್ಮನಿಯವರ ಜೊತೆಗಿನ ಸಂಬಂದವನ್ನು ಸ್ಮರಿಸಿ, ಸಂತಾಪ ಸೂಚಿಸಿದ್ದಾರೆ.
Leave a Comment