ಹೊನ್ನಾವರ –ಮಂಗಳವಾರ ರಾತ್ರಿ ಮಂಕಿ ರೇಲ್ವೇ ಸ್ಟೇಷನ್ಬಳಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ತನಿಖೆಯಲ್ಲಿ ಮೃತ ವ್ಯಕ್ತಿ ದೆಹಲಿ ಮೂಲದ ಸಂತೋಷಕುಮಾರ್.ಎಂ ಎಂದು ಗುರುತಿಸಲಾಗಿದೆ.ಮಂಗಳವಾರ ರಾತ್ರಿ 10 -50 ರ ಸುಮಾರಿಗೆ ತ್ರಿವೇಂದ್ರಮ್ದಿಂದ ನಿಜಾಮುದ್ದಿನ್ಗೆ ಹೋಗುವ ಪ್ರಯಾಣಿಕರ ರೈಲು ಕ್ರಾಸಿಂಗ್ ಸಲುವಾಗಿ ಮಂಕಿ ರೇಲ್ವೇ ಸ್ಟೇಷನ್ ನಿಂತಿರುವಾಗ 11 -35 ರ ಸುಮಾರಿಗೆ ದೆಹಲಿಯಿಂದ ತ್ರಿವೇಂದ್ರಮ್ಗೆ ಹೋಗುವ ಪ್ರಯಾಣಿಕರ ರೈಲು … [Read more...] about ಮಂಕಿ ರೇಲ್ವೆ ಸ್ಟೇಷನ್ಬಳಿ ದೆಹಲಿ ಮೂಲದ ವ್ಯಕ್ತಿಯ ಶವ ಪತ್ತೆ
Crime
ಚಿಗಳ್ಳಿ, ಬಾಚಣಕಿ ಗ್ರಾಮಗಳಲ್ಲಿ ನಾಲ್ಕು ಶ್ರೀಗಂಧದ ಮರಗಳನ್ನು ಕಡಿದ ಕಳ್ಳರು
ಮುಂಡಗೋಡ : ತಾಲೂಕಿನ ಚಿಗಳ್ಳಿ ಹಾಗೂ ಬಾಚಣಕಿ ಗ್ರಾಮಗಳಲ್ಲಿ ಒಟ್ಟು ನಾಲ್ಕು ಶ್ರೀಗಂಧದ ಮರಗಳನ್ನು ಕಡಿದುಕೊಂಡು ಹೋದ ಘಟನೆ ರಾತ್ರಿ ನಡೆದಿದೆ.ಚಿಗಳ್ಳಿ ಗ್ರಾಮದ ಫಕೀರಪ್ಪ ಹರಿಜನ ಎಂಬುವರ ಮನೆಯ ಹಿತ್ತಲಿನಲ್ಲಿ ಒಂದು ಮರ, ಉಪಾಸಗೇರಿ ಓಣಿಯಲ್ಲಿ ಇರುವ ಝಂಡೇಕಟ್ಟಿಯ ಬಳಿಯಲ್ಲಿದ್ದ ಒಂದು ಮರ, ಉಲ್ಲಾಸ ಕುಲಕರ್ಣಿ ಎಂಬುವರ ಮನೆಯ ಆವರಣದಲ್ಲಿದ್ದ ಒಂದು ಮರ ಸೇರಿ ಒಟ್ಟು 3 ಶ್ರೀಗಂಧದ ಮರಗಳನ್ನು ಕಡಿದುಕೊಂಡು ಟೊಂಗೆಗಳನ್ನು ಅಲ್ಲಿಯೆ ಬಿಟ್ಟಿದ್ದಾರೆ.ಬಾಚಣಕಿ ಗ್ರಾಮದ … [Read more...] about ಚಿಗಳ್ಳಿ, ಬಾಚಣಕಿ ಗ್ರಾಮಗಳಲ್ಲಿ ನಾಲ್ಕು ಶ್ರೀಗಂಧದ ಮರಗಳನ್ನು ಕಡಿದ ಕಳ್ಳರು
ಔಷಧಿ ನೀಡಿದ ನಕಲಿ ವೈದ್ಯನಿಗೆ ಮೂರು ವರ್ಷ ಜೈಲು 10ಸಾವಿರ ದಂಡ ವಿಧಿಸಿ ನ್ಯಾಯಲಯ ಆದೇಶ
ಕಾರವಾರ: ಔಷಧಿ ನೀಡುವುದಾಗಿ ನಂಬಿಸಿ 2.34 ಲಕ್ಷ ರೂ ವಂಚಿಸಿದ ನಕಲಿ ವೈದ್ಯನಿಗೆ 3 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿ ಸಿ.ಜಿ.ಎಂ ನ್ಯಾಯಾಲಯದ ನ್ಯಾಯಾದೀಶ ಎನ್ ಎಂ ರಮೇಶ್ ಆದೇಶ ಹೊರಡಿಸಿದ್ದಾರೆ.ಬೆಂಗಳೂರಿನ ಯಶವಂತಪುರ ಮೂಲದ ಹರೀಶ ಯಲ್ಲಪ್ಪ ಗೊಲ್ಲರ್ ಎಂಬ ವ್ಯಕ್ತಿಯೂ ಇನ್ನೊಬ್ಬ ಆರೋಪಿಯ ಜೊತೆ ಸೇರಿ ಕಾರವಾರದ ಹೊಟೇಲ್ ವೊಂದರಲ್ಲಿ ಪರಿಚಯವಾದ ಶ್ರೀಕಾಂತ ಆನಂದರಾವ್ ದೇಶಪಾಂಡೆ ಎಂಬಾತರಿಗೆ ಔಷಧಿ ನೀಡುವುದಾಗಿ ನಂಬಿಸಿದ್ದರು. ಶ್ರೀಕಾಂತ ಆನಂದರಾವ್ … [Read more...] about ಔಷಧಿ ನೀಡಿದ ನಕಲಿ ವೈದ್ಯನಿಗೆ ಮೂರು ವರ್ಷ ಜೈಲು 10ಸಾವಿರ ದಂಡ ವಿಧಿಸಿ ನ್ಯಾಯಲಯ ಆದೇಶ
ಹಳಿಯಾಳ ಪೋಲಿಸರ ಕಾರ್ಯಾಚರಣೆ ಗಾಂಜಾ ಸಸಿಗಳೊಂದಿಗೆ ಆರೋಪಿ ಅಂದರ್
ಹಳಿಯಾಳ:- ತನ್ನ ಮನೆಯ ಹಿತ್ತಲಿನಲ್ಲಿ ಗಾಂಜಾ ಸಸಿಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿದ ಹಳಿಯಾಳ ಪೋಲಿಸರು 1 ಕೆಜಿ 15 ಗ್ರಾಂ ನಷ್ಟು 11 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೆರೆಗೆ ಸಿಪಿಐ ಮೋತಿಲಾಲ್ ಪವಾರ ಅವರ ನೇತೃತ್ವದಲ್ಲಿ ತಾಲೂಕಿನ ಗುಂಡೊಳ್ಳಿ ಗ್ರಾಮದ ವಿಠ್ಠಲ ಕರಿಯಪ್ಪ ಹುರ್ಕೆಗೌಡ ಎನ್ನುವವರ ಮನೆಯ ಮೇಲೆ ದಾಳಿ ನಡೆಸಿ ಮನೆಯ ಹಿತ್ತಲಿನಲ್ಲಿ … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಗಾಂಜಾ ಸಸಿಗಳೊಂದಿಗೆ ಆರೋಪಿ ಅಂದರ್
ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಕೊಂದು ನೇಣಿಗೆ ಕೊರಳೊಡ್ಡುವ ಮೂಲಕ ಆತ್ಮಹತ್ಯೆ ಮಾಡಿಕೊಂಡ ಗಂಡ
ಹೊನ್ನಾವರ: ಪತ್ನಿಯ ಶೀಲ ಶಂಕಿಸಿ ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಆಕೆಯ ಮೇಲೆ ಗಂಭೀರ ಹಲ್ಲೆ ನಡೆಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿಯ ಕುಳಿಮನೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.ಕುಳಿಮನೆಯ ವೆಂಕಟೇಶ ನಾಯ್ಕ (38) ಎನ್ನುವವನು ಪ್ರತಿನಿತ್ಯ ಕುಡಿದು ಬರುತ್ತಿದ್ದು ದುಡಿದ ಹಣವನ್ನು ಮನೆಗೆ ನೀಡದೇ ಹಣಕ್ಕಾಗಿ ಪತ್ನಿಯೊಂದಿಗೆ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನು. ಅಲ್ಲದೆ ಹೆಂಡತಿಯನ್ನು ಸಂಶಯದಿಂದ ನೋಡುವ ಮೂಲಕ … [Read more...] about ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಕೊಂದು ನೇಣಿಗೆ ಕೊರಳೊಡ್ಡುವ ಮೂಲಕ ಆತ್ಮಹತ್ಯೆ ಮಾಡಿಕೊಂಡ ಗಂಡ




