ಕಾರವಾರ: ಮೂರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ವರ್ಷದವರೆಗೆ ರಾಜ್ಯದಾದ್ಯಂತ ಯೋಗಮಯ ಕರ್ನಾಟಕ ಅಭಿಯಾನ ನಡೆಸಲಾಗುತ್ತಿದೆ. ಅದೇ ರೀತಿ ಯೋಗಮಯ ಉತ್ತರ ಕನ್ನಡ ಅಭಿಯಾನ ಸಹ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ನಿಮಿತ್ತ ಯೋಗ ಶಿಬಿರ, ಯೋಗ ಶಿಕ್ಷಕರ ತರಬೇತಿ ಶಿಬಿರ, ಬೊಜ್ಜು ನಿವಾರಣಾ ಶಿಬಿರವನ್ನು ಜಿಲ್ಲೆಯ ಪ್ರತಿ ವಾರ್ಡ್ … [Read more...] about ಯೋಗಮಯ ಉತ್ತರ ಕನ್ನಡ,ಯೋಗ ಶಿಕ್ಷಕರ ತರಬೇತಿ ಶಿಬಿರ ಆರಂಭ,
National News
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಪತ್ರ ನೀಡಿಕೆ ಪ್ರಗತಿ ಪರಿಶೀಲನೆ
ಕಾರವಾರ:ಅರಣ್ಯ ಹಕ್ಕು ಕಾಯ್ದೆ ಅಡಿ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಪೈಕಿ ಈಗಾಗಲೇ ತಿರಸ್ಕರಿಸಲಾಗಿರುವ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಪತ್ರ ನೀಡಿಕೆ ಪ್ರಗತಿ ಪರಿಶೀಲನೆ ನಡೆಸಿದರು. ಗ್ರಾಮ ಅರಣ್ಯ ಹಕ್ಕು ಸಮಿತಿ ಮಟ್ಟದಲ್ಲಿ ಹೊರತುಪಡಿಸಿ ಉಪವಿಭಾಗಾಧಿಕಾರಿ ಮಟ್ಟದಲ್ಲಿ ವಿವಿಧ … [Read more...] about ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಪತ್ರ ನೀಡಿಕೆ ಪ್ರಗತಿ ಪರಿಶೀಲನೆ
ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಖಾರ್ಗೆ ಗ್ರಾಮಸ್ಥರ ಆಗ್ರಹ
ಕಾರವಾರ:ಗ್ರಾಮೀಣ ಪ್ರದೇಶದ ಖಾರ್ಗೇ ಜನರ ಹಲವು ದಶಕಗಳ ಬೇಡಿಕೆಯಾಗಿರುವ ಶಾಶ್ವತ ಸೇತುವೆ ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ ಜನರು ಶಾಶ್ವತ ಸೇತುವೆಗಾಗಿ ಕಾಯುತ್ತಿದ್ದು ಹೊಳೆ ದಾಟಲು ನಿತ್ಯ ಹರಸಾಹಸ ಪಡಬೇಕಾದ ಅನಿವಾರ್ಯ ಸ್ಥಿತಿ ಇದೆ. ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಖಾರ್ಗೇ ಗ್ರಾಮದ ಬಡಜೂಗ್-ಕೆರವಡಿಯ ಕರ್ಕಲ್ ನಡುವೆಯ ನದಿಗೆ ಹಾಗೂ ಮಾಂಡೆಬೋಳಾ- ಕಡಿಯಾ ನಡುವಿನ ಕಾಳಿ ನದಿಯ ಉಪ ನದಿಯಾಗಿರುವ ಕಾಣಿಕೆ (ನೈತಿಸಾವರ) ನದಿಯನ್ನು ಇಲ್ಲಿನ ಜನರು ದಾಟಬೇಕು ಎಂದರೆ … [Read more...] about ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಖಾರ್ಗೆ ಗ್ರಾಮಸ್ಥರ ಆಗ್ರಹ
ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ
ಕಾರವಾರ:ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ ನಡೆಯಲಿದೆ ಎಂದು ಬೆಂಗಳೂರಿನ ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ್ ನಾಯ್ಕ ಹೇಳಿದರು. ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವಗಡದ ರಿದಂ ಹಾರ್ಟ್ ಬೀಟ್ ನೃತ್ಯ ಶಾಲೆ ಹಾಗೂ ತಾಂಡವ ಕಲಾ ನಿಕೇತನ ಸಂಸ್ಥೆಗಳ ಸಹಯೋಗದಲ್ಲಿ ಕರಾವಳಿ ಹಬ್ಬ ಅದ್ಧೂರಿಯಾಗಿ ಜರುಗಲಿದೆ. ಸ್ಥಳೀಯ ಕಲಾವಿದರಲ್ಲದೇ ಕನ್ನಡ ಚಿತ್ರರಂಗದ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ … [Read more...] about ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ
ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ
ಕಾರವಾರ:ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಮೇ 10ರಂದು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಬೆಳಿಗ್ಗೆ 10ಗಂಟೆಗೆ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ … [Read more...] about ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ


