ಹೊನ್ನಾವರ:ತೆಂಗಿನಕಾಯಿ ಕೊಯ್ಲು ಮಾಡುವ ಕೂಲಿ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಮಾವಿನಕುರ್ವಾದ ಗದ್ದೆಮನೆ ಗ್ರಾಮದಲ್ಲಿ ಸಂಭವಿಸಿದೆ. ಲಕ್ಷ್ಮಣ ಬಡಚ ಗೌಡ (55) ಮೃತ ಕಾರ್ಮಿಕ. ಈತ ಗದ್ದೆಮನೆ ಗ್ರಾಮದ ಕೃಷ್ಣಪ್ಪ ತಿಮ್ಮಪ್ಪ ನಾಯ್ಕ ಎಂಬುವರ ಮನೆಯ ತೋಟದಲ್ಲಿ ತೆಂಗಿನಕಾಯಿ ಕೊಯ್ಯಲು ಹೋಗಿದ್ದ ವೇಳೆ ಕೊಯ್ಲು ಮುಗಿಸಿ ಇಳಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಪಿಎಸ್ಐ … [Read more...] about ಕಾಲು ಜಾರಿ ಬಿದ್ದು ಕಾರ್ಮಿಕ ಸಾವು
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ
ಕಾರವಾರ: ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ ಕೈಗಾದ ಐದು ವರ್ಷದ ಬಾಲಕಿ ಪ್ರಿಯದರ್ಶಿನಿ ಎಂ. ಹಿರೇಮಠ ಎಲ್ಲರ ಮೆಚ್ಚುಗೆಗೆ ಕಾರಣರಾದರು.ಬುಧವಾರ ಕೈಗಾದ ವಸತಿ ಸಂಕೀರ್ಣದ ಸ್ಕೇಟಿಂಗ್ ರಿಂಕ್ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಪ್ರಿಯದರ್ಶಿನಿ ಈ ಸಾಧನೆ ಮಾಡಿದಳು. 50 ಮೀಟರ್ಸ್ ದೂರದವರೆಗೆ ನೆಲದಿಂದ 6.50 ಇಂಚು ಎತ್ತರದಲ್ಲಿ ಒಟ್ಟು 40 ಬಾರ್ಗಳನ್ನು ಅಡ್ಡಲಾಗಿ ಇಡಲಾಗಿತ್ತು. ಈ ಬಾರ್ಗಳ … [Read more...] about ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ
ನೆಲೆ ಕಳೆದುಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸಲು ಚರ್ಚೆ
ಭಟ್ಕಳ: ಮುರ್ಡೇಶ್ವರದಲ್ಲಿ ತೆರವು ಕಾರ್ಯಾಚರಣೆಯಿಂದ ನೆಲೆ ಕಳೆದು ಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸುವ ನಿಟ್ಟಿನಲ್ಲಿ ಮಂಗಳವಾರ ಶಾಸಕ ಮಂಕಾಳ ವೈದ್ಯ ಹಿರಿಯ ಅಧಿಕಾರಿಗಳೊಂದಿಗೆ 3 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ಇದಕ್ಕೂ ಮೊದಲು ಭಟ್ಕಳದ ಉಪ ವಿಭಾಗಾಧಿಕಾರಿ ಎಂ. ಎನ್ ಮಂಜು ನಾಥ್, ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ವಿವಿಧ ಇಲಾಖೆಯ ಅಧಿಕಾರಿ ಗಳೊಂದಿಗೆ ಕಡಲತೀರಕ್ಕೆ ತೆರಳಿ ಅಂಗಡಿ ಗಳನ್ನು ತೆರೆಯಲು ಗುರುತು ಹಾಕುವ ಕಾರ್ಯ ಆರಂಭಿಸಿದರು. ಆದರೆ … [Read more...] about ನೆಲೆ ಕಳೆದುಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸಲು ಚರ್ಚೆ
ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ
ಮುಂಡಗೋಡ: ಕಾಡಿಗೆ ಬಿಟ್ಟು ಬಂದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತಿದ್ದ ಜಿಂಕೆ ಮರಿಯೊಂದನ್ನು ಬುಧವಾರ ದಾವಣಗೆರೆ ಬಳಿಯ ಆನಗೋಡ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ವಡಗಟ್ಟಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಿಂಕೆ ಮರಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲದಿನಗಳವರೆಗೆ ಆರೈಕೆ ಮಾಡಿ, ಚೇತರಿಸಿಕೊಂಡ ನಂತರ ಕಾಡಿಗೆ ಬಿಟ್ಟಿದ್ದರು. ಆದರೆ, … [Read more...] about ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ
ದಲಿತ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ,ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’
ಕುಂದಾಪುರ:ಅವರಿಬ್ಬರು ಒಂದೇ ಊರಿನವರು. ಅಷ್ಟೇ ಅಲ್ಲ ಒಂದೇ ಕೇರಿಯವರು. ಅದ್ಯೇಗೋ ಅವರ ನಡುವೆ ಪ್ರೇಮ ಕಹಾನಿ ಸ್ಟಾರ್ಟ್ ಆಗಿತ್ತು. ಅದು ಸುಮಾರು ಎರಡು ವರ್ಷದ ಲವ್ವು. ಮದುವೆಗೆ ಹುಡುಗನ ಕಡೆಯವರು ಓಕೆ ಅಂದ್ರೂ ಕೂಡ ಯುವತಿ ಮನೆಯವರು ಅಡ್ಡಿಯಾದ್ರು. ಆದ್ರೂ ಕೂಡ ಜಾತಿ-ಧರ್ಮದ ಮುಲಾಜೇ ಇಲ್ಲದ ಈ ಮದುವೆ ನಡೆದು ಹೋಯ್ತು. ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. ನನಗೆ ನೀನು..ನಿನಗೆ ನಾನು..ಹೀಗೆ ಪರಸ್ಪರ … [Read more...] about ದಲಿತ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ,ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’




