ಹೊನ್ನಾವರ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರಿನಲ್ಲಿ ಹಳ್ಳದ ನೀರು ಒಮ್ಮೆಲೆ ರೈತರ ಬಾವಿ, ತೋಟಗಳಿಗೆ ನುಗ್ಗಿದ್ದು, ನೀರಿನ ರಭಸಕ್ಕೆ ಅನೇಕ ಕಡೆ ರೈತರ ತೋಟದ ಕಂಪೌಂಡ್ ಸಂಪೂರ್ಣ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.ಕಡ್ನೀರಿನ ದೋಸೆಕಟ್ಟು ಭಾಗದಿಂದ ಕೊಪ್ಪನಮಕ್ಕಿ, ಮೋಲಿಗದ್ದೆ ಮಾರ್ಗವಾಗಿ ಕೆಳಗಿನ ಕೇರಿ, ಕಾರಗದ್ದೆ ಮೂಲಕ ಚಂದಾವರಕ್ಕೆ ಕೂಡುವ ಹಳ್ಳದ ನೀರು ನೂರಾರು ರೈತರ ತೋಟಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ. ನೀರು … [Read more...] about ಸುರಿದ ಧಾರಾಕಾರ ಮಳೆ – ಕಡ್ನೀರಿನಲ್ಲಿ ಅಡಿಕೆ ತೋಟಗಳಿಗೆ ಹಾನಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮೃತ ಕಾರ್ಯಕರ್ತನ ಮನೆಗೆ ಶಾಸಕ ಸುನೀಲ ನಾಯ್ಕ ಭೇಟಿ
ಹೊನ್ನಾವರ: ತಾಲೂಕಿನ ಅಡಿಕೆಕುಳಿಯಲ್ಲಿ ಇತ್ತಿಚಿಗೆ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿ ಬಿಜೆಪಿ ಕಾರ್ಯಕರ್ತನೂ ಆಗಿದ್ದ ನಾರಾಯಣ ಮರಾಠಿ ಅವರ ಮನೆಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಂತ್ವಾನ ಹೇಳಿದರು. ತುರ್ತು ನಿರ್ವಹಣೆಗಾಗಿ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿರುದಲ್ಲದೇ, ಸರ್ಕಾರದಿಂದಲೂ ಹೆಚ್ಚಿನ ಪರಿಹಾರ ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು. … [Read more...] about ಮೃತ ಕಾರ್ಯಕರ್ತನ ಮನೆಗೆ ಶಾಸಕ ಸುನೀಲ ನಾಯ್ಕ ಭೇಟಿ
ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಸಂತೋಷ ಮೇಸ್ತ ನೇಮಕ
ಹೊನ್ನಾವರ : ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾದ ಆರ್. ಎಚ್. ನಾಯ್ಕ ಕಾಗಾಲ ಇವರ ಸೂಚನೆಯ ಮೇರೆಗೆ ಪಟ್ಟಣದ ಉದ್ಯಮನಗರ ಸಂತೋಷ ವಿಠ್ಠಲ ಮೇಸ್ತ ಇವರನ್ನು ಹೊನ್ನಾವರ ಬ್ಲಾಕ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕರ್ನಾಟಕ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾದ ಶ್ರೀಮತಿ ಎಸ್. ಪ್ಯಾರಿಜಾನ್ ಆದೇಶ ಹೊರಡಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. … [Read more...] about ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಸಂತೋಷ ಮೇಸ್ತ ನೇಮಕ
ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದಕ್ಕಷ್ಟೇ ಸೀಮಿತ..? ಸೋಲಾರ್ ಬೀದಿ ದೀಪ !
ಸಾರ್ವಜನಿಕರು ಓಡಾಡುವ ಕಚ್ಚಾ ರಸ್ತೆ, ಕಾಲುದಾರಿ, ಗೃಂಥಾಲಯ, ಪಂಚಾಯತ್ ಆವರಣ, ದೇವಸ್ಥಾನಗಳ ಎದುರು, ಉದ್ಯಾನವನ, ಹೆದ್ದಾರಿಯ ವೃತ್ತಗಳು ಸೇರಿದಂತೆ ನಗರ ಗ್ರಾಮೀಣ ಪ್ರದೇಶಗಳೆಂಬ ಬೇದವಿಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ ಕಳೆದ ಐದಾರು ವರ್ಷಗಳಿಂದ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದೇ ಅಳವಡಿಸಿದ್ದು. ಆದರೆ ಇತ್ತೀಚೆಗೆ ಅವುಗಳ ಸ್ಥಿತಿಗತಿಯನ್ನು ಅವಲೋಕಿಸಿದರೆ ಸೋಲಾರ್ ದೀಪದ ಅಳವಡಿಕೆಗ ಶಕ್ತಿ ಮೂಲಗಳ ಸಂರಕ್ಷಣೆಗಿಂತ ಭ್ರಷ್ಟಾಚಾರಿಗಳ ಕಿಸೆಯ ಭಾರ ಹೆಚ್ಚಿಸುವುದಕ್ಕೇ … [Read more...] about ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದಕ್ಕಷ್ಟೇ ಸೀಮಿತ..? ಸೋಲಾರ್ ಬೀದಿ ದೀಪ !
ಸಾಲ್ಕೋಡ ಹಳ್ಳದಲ್ಲಿ ಕಸದ ರಾಶಿ ಸೇತುವೆಗೆ ಹಾನಿಯಾಗುವ ಸಾಧ್ಯತೆ
ಸಾಲ್ಕೋಡ್ ಭಾಗದ ಕೃಷಿಕರ ಅನುಕೂಲಕ್ಕಾಗಿ ಹಳ್ಳಕ್ಕೆ ನಿರ್ಮಿಸಿದ ಚೆಕ್ಡ್ಯಾಂನ ಕಂಬಗಳಿಗೆ ಕಾಡಿನ ಮರ ಮಟ್ಟುಗಳು ಕಸ ಕಡ್ಡಿಗಳು ಬಂದು ತಾಡಿದ್ದು ಕಸದ ದೊಡ್ಡ ರಾಶಿಯೇ ಶೇಖರಣೆಯಾಗಿದೆ. ಚಿಕ್ಕೊಳ್ಳಿ, ತೊಳಸಾಣಿ ಮುಂತಾದ ಕಡೆಯ ಕಾಡುಗಳಿಂದ ಹರಿದುಬರುವ ಮಳೆಯ ನೀರು ತನ್ನೊಂದಿಗೆ ಕಾಡಿನ ಕಟ್ಟಿಗೆ ಮರದ ದಿಮ್ಮೆಗಳನ್ನೂ ಕೊಚ್ಚಿಕೊಂಡು ಬಂದಿದೆ, ಇದು ಹಳ್ಳದಲ್ಲಿರುವ ಕಾಂಕ್ರೀಟ್ ಕಂಬಗಳ ನಡುವೆ ಮರದ ತುಂಡುಗಳು ಸಿಕ್ಕಿಹಾಕಿಕೊಂಡು ಕಸದ ರಾಶಿ ಸಂಗ್ರಹವಾಗಿದೆಲೋಡ್ಗಟ್ಟಲೆ … [Read more...] about ಸಾಲ್ಕೋಡ ಹಳ್ಳದಲ್ಲಿ ಕಸದ ರಾಶಿ ಸೇತುವೆಗೆ ಹಾನಿಯಾಗುವ ಸಾಧ್ಯತೆ




