ಕಾರವಾರ:ಸೋಂದಾ ವಾದಿರಾಜಮಠದಿಂದ ಹುಬ್ಬಳ್ಳಿಗೆ ನೂತನ ವೇಗದೂತ ಸಾರಿಗೆಯನ್ನು ಶಿರಸಿ ಘಟಕದಿಂದ ಪ್ರಾರಂಭಿಸಲಾಗಿದೆ. ವಾದಿರಾಜಮಠದಿಂದ ಹೊರಡುವ ಬಸ್ಸು ಮಧ್ಯಾಹ್ನ 02. ಗಂಟೆಯಿಂದ ಸ್ವರ್ಣವಲ್ಲಿಮಠ, ಉಮಚಗಿ, ಮಾವಿನಕಟ್ಟಾ, ಚಿಪಗೇರಿ, ಚಳಗೇರಿ, ಕಾತೂರು, ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಯನ್ನು ಸಂಜೆ 4.45ಕ್ಕೆ ಮತ್ತು ಮರುದಿನ ಹುಬ್ಬಳ್ಳಿಯಿಂದ ಬೆಳ್ಳಗ್ಗೆ 07.30ಕ್ಕೆ ಹೊರಡಲಿದ್ದು 10.30 ಗಂಟೆಗೆ ಸೋಂದ ವಾದಿರಾಜಮಠವನ್ನು ತಲುಪಲಿದೆ. ಪ್ರಯಾಣಿಕರ ಬೇಡಿಕೆ ಮೆರೆಗೆ … [Read more...] about ಸೋಂದಾ ವಾದಿರಾಜಮಠದಿಂದ ಹುಬ್ಬಳ್ಳಿಗೆ ನೂತನ ವೇಗದೂತ ಸಾರಿಗೆ
Karwar News
ಅಕ್ರಮ ಮದ್ಯ ಸಾಗಾಟ;ಓರ್ವನ ಬಂಧನ
ಕಾರವಾರ:ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವ್ಯಕ್ತಿಯೊಬ್ಬರನ್ನು ಬಂಧಿಸಿದ ಘಟನೆ ಅನಮೋಡ ತನಿಖಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಾರಿಯೊಂದರಲ್ಲಿ ತುಂಬಿಸಲಾದ ಕಟ್ಟಿಗೆ ತಳಭಾಗದಲ್ಲಿ 1.15ಲಕ್ಷ ಮೌಲ್ಯದ 373.140 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಲಾರಿ ತಪಾಸಣೆ ನಡೆಸಿದ ಅಧಿಕಾರಿಗಳು ಆರೋಪಿ ಚಾಲಕ ಕೃಷ್ಣಾ ಮಾರುತಿ ಪರವರ ಎಂಬಾತನನ್ನು ಬಂಧಿಸಿದ್ದಾರೆ. … [Read more...] about ಅಕ್ರಮ ಮದ್ಯ ಸಾಗಾಟ;ಓರ್ವನ ಬಂಧನ
ತಡೆಗೋಡೆ ನಿರ್ಮಿಸುವಂತೆ ಆಗ್ರಹ
ಕಾರವಾರ:ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಸನವಾಡದಲ್ಲಿನ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುತ್ತಿದ್ದು, ಇದಕ್ಕೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಉದಯ ಬಶೆಟ್ಟಿ ಶಾಸಕರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಮನವಿ ಸಲ್ಲಿಸಿರುವ ಅವರು, ಕೃಷಿ ಜಮೀನಿಗೆ ಕಾಳಿ ನದಿಯ ಉಪ್ಪು ನೀರು ನುಗ್ಗುವದರಿಂದ 240ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ನೀರಿನ ಏರಿಳಿತದಿಂದ ಭತ್ತದ ಬೆಳೆಗಳೆಲ್ಲವೂ ಹಾಳಾಗುತ್ತಿದೆ. ಕೆಲವೊಮ್ಮೆ ಮನೆಯೊಳಗೂ ನೀರು ನುಗ್ಗಿದ … [Read more...] about ತಡೆಗೋಡೆ ನಿರ್ಮಿಸುವಂತೆ ಆಗ್ರಹ
ಉಚಿತ ಯೋಗ ಹಾಗೂ ಯುನಾನಿ ಚಿಕಿತ್ಸಾ ಶಿಬಿರ
ಕಾರವಾರ: ನವೆಂಬರ್ 29ರಿಂದ ಡಿಸೆಂಬರ್ 4ರ ವರೆಗೆ ಕಾಜುಭಾಗದ ಮಹಾಸತಿ ಮಂಟಪದಲ್ಲಿ ಉಚಿತ ಯೋಗ ಹಾಗೂ ಯುನಾನಿ ಚಿಕಿತ್ಸಾ ಶಿಬಿರ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 6:30 ರಿಂದ 7:30 ರವರೆಗೆ ಶಿಬಿರವನ್ನು ನಡೆಸಲಾಗುತ್ತದೆ. ರೋಟರಿ ಕ್ಲಬ್ ಆಫ್ ಕಾರವಾರ ಸೀಸೈಡ್ ಹಾಗೂ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಿಬಿರ ಸಂಘಟಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ರೋಟರಿ ಕ್ಲಬ್ ಆಫ್ ಸೀಸೈಡನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬ. ಹಿರೇಮಠ ಮನವಿ ಮಾಡಿದ್ದು, … [Read more...] about ಉಚಿತ ಯೋಗ ಹಾಗೂ ಯುನಾನಿ ಚಿಕಿತ್ಸಾ ಶಿಬಿರ
ಮುಖ್ಯಮಂತ್ರಿಗಳಿಗೆ ಪತ್ರ
ಕಾರವಾರ: ಕಳೆದ ಆರು ತಿಂಗಳಿನಿಂದ ವಕ್ಟ್ ಸಮಿತಿ ಸಭೆ ನಡೆಯದಿರುವದಕ್ಕೆ ಅಸಮಧಾನಗೊಂಡಿರುವ ಉತ್ತರ ಕನ್ನಡ ಜಿಲ್ಲಾ ವಕ್ಟ ಸಲಹಾ ಸಮಿತಿ ಸದಸ್ಯ ನಜೀರ ಅಹಮದ್ ಯು ಶೇಖ್ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾ ವಕ್ಛ ಕಛೇರಿಯನ್ನು ಕಾರವಾರಕ್ಕೆ ಸ್ಥಳಾಂತರಿಸುವ ಬಗ್ಗೆ ಹಾಗೂ ವಕ್ಛ ಅಧಿಕಾರಿ ಎಂ.ಎಂ. ಸವಣೂರುರನ್ನು ಬದಲಿಸುವ ಕುರಿತು ಈ ಹಿಂದೆ ಪತ್ರ ಬರೆದಿದ್ದು, ಅದಕ್ಕೆ ತಮ್ಮಿಂದ ಯಾವದೇ ಪ್ರತ್ಯುತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಬರೆದ … [Read more...] about ಮುಖ್ಯಮಂತ್ರಿಗಳಿಗೆ ಪತ್ರ
