ಕಾರವಾರ:ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಕಾರವಾರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ. ಕು.ಶಾಂತಲಾ ಹರಿಕಂತ್ರ ಗುಂಡು ಎಸೆತದಲ್ಲಿ ದ್ವಿತೀಯ, ಹೇಮಾ ಗೌಡ 1500 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಾಚಾರ್ಯ ಪ್ರೊ.ವಿ.ಪಿ.ಗಂಗೊಳ್ಳಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ ಎಂ.ನಾಯ್ಕ, ದೈಹಿಕ ಶಿಕ್ಷಣ ನಿರ್ದೇಶಕ … [Read more...] about ವಿವಿಧ ಬಹುಮಾನ ಪಡೆದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು
Karwar News
ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ
ಕಾರವಾರ:ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಿದ್ದ ಸಹಾಯವಾಣಿಯ ಬಗ್ಗೆ ಜನರಿಗೆ ಸೂಕ್ತ ಮಾಹಿತಿಯಿಲ್ಲ. ಹೀಗಾಗಿ ಹಿರಿಯ ನಾಗರಿಕರಿಂದ ದೂರುಗಳು ಬರುತ್ತಿಲ್ಲ. ಹತ್ತು ತಿಂಗಳ ಅವದಿಯಲ್ಲಿ ಬೆರಳೆಣಿಕೆಯ ದೂರುಗಳು ಮಾತ್ರ ಕಚೇರಿ ಸಹಾಯವಾಣಿಗೆ ಬಂದಿದೆ. ಹಿರಿಯ ನಾಗರಿಕರು ಯಾವುದೇ ಕಿರುಕುಳಕ್ಕೆ ಒಳಗಾಗದೆ ಇರಲು ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜನವರಿ 2017ರಲ್ಲಿ ಆರಂಭಿಸಲಾಯಿತು. ಮಕ್ಕಳು ತಮ್ಮ … [Read more...] about ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ
ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ
ಕಾರವಾರ:ಬೈತಖೋಲ್ ನಗರ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಹಾಗೂ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತಿದ್ದು, ಈ ಬಗ್ಗೆ ಪೊಲೀಸರಿಗೆ ಗೊತ್ತಿದ್ದರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದರು. ಕಳೆದ ಕೆಲ ವರ್ಷಗಳಿಂದ ಬೈತಖೋಲ ನಗರಸಭಾ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಹಾಗೂ ಗಾಂಜಾ ದಂಧೆ ನಡೆಸಲಾಗುತ್ತಿದೆ. ಮನೆಗಳಲ್ಲಿಯೇ ಮದ್ಯ ಮಾರಾಟದ ಅಡ್ಡವಾಗಿಸಿಕೊಳ್ಳಲಾಗಿದೆ. ಇಂತಹ … [Read more...] about ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ
ಭಟ್ಕಳ ಪಟ್ಟಣದ ಪುರಸಭೆ ಮಳಿಗೆ ಹರಾಜು ವೇಳೆ ನಡೆದಿದ್ದ ಗಲಾಟೆ ಪ್ರಕರಣ;ಆರು ಆರೋಪಿಗಳು ಪೊಲೀಸ್ ವಶಕ್ಕೆ
ಕಾರವಾರ:ಭಟ್ಕಳ ಪಟ್ಟಣದ ಪುರಸಭೆ ಮಳಿಗೆ ಹರಾಜು ವೇಳೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರ ಬಂದ ಬಿಜೆಪಿ ಮುಖಂಡರನ್ನು ಬರ ಮಾಡಿಕೊಳ್ಳಲು ಆಗಮಿಸಿದ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಮುಖಂಡ ಗೋವಿಂದ ನಾಯ್ಕ ಹಾಗೂ ಕೃಷ್ಣ ಆಸರಕೇರೆ ಎಂಬಾತರನ್ನು ಸೆ.14ರಂದು ಭಟ್ಕಳ ಪುರಸಭೆ ವ್ಯಾಪ್ತಿಯ ವ್ಯಾಪಾರ ಮಳಿಗೆ ಹರಾಜು ವೇಳೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಹಲವರ ಮೇಲೆ ದೂರು ದಾಖಲಿಸಿದ್ದ … [Read more...] about ಭಟ್ಕಳ ಪಟ್ಟಣದ ಪುರಸಭೆ ಮಳಿಗೆ ಹರಾಜು ವೇಳೆ ನಡೆದಿದ್ದ ಗಲಾಟೆ ಪ್ರಕರಣ;ಆರು ಆರೋಪಿಗಳು ಪೊಲೀಸ್ ವಶಕ್ಕೆ
ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆ
ಕಾರವಾರ:ಭಾರತೀಯ ಅಣುಶಕ್ತಿ ನಿಗಮದ ಪರಿಸರ ಉಸ್ತುವಾರಿ ಕಾರ್ಯಕ್ರಮದ ಅಡಿಯಲ್ಲಿ ಕೈಗಾ ವಿದ್ಯುತ್ ಕೇಂದ್ರವು ಕಳೆದ ಏಳು ವರ್ಷಗಳಿಂದ ಬರ್ಡ ಮ್ಯಾರಥಾನ್ ಆಯೋಜಿಸುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆಯನ್ನು ನಡೆಸಲಾಗಿದೆ. ಸ್ಥಳೀಯ ಜೈವ ವಿವಿದ್ಯತೆಯತ್ತ ಬೆಳಕು ಚೆಲ್ಲಲು ಈ ಕಾರ್ಯಕ್ರಮ ಆಯೋಜಿಸಿದ್ದು, ಕೈಗಾ ಮತ್ತು ಮಲ್ಲಾಪುರ ಗ್ರಾಮಗಳ ನಡುವಿನ ಐದು ವಿಭಾಗಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 70 ಪ್ರಬೇಧದ ಚಿಟ್ಟೆಗಳನ್ನು … [Read more...] about ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆ



