ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಉಂಟಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಅಣು ಸ್ಥಾವರ ವ್ಯಾಪ್ತಿಯ ಕುಚೇಗಾರ್ ಗ್ರಾಮದಲ್ಲಿ ಶನಿವಾರ ಅಣಕು ಪ್ರದರ್ಶನ ನಡೆಸಲಾಯಿತು. ಕುಚೇಗಾರ್ ಗ್ರಾಮಸ್ಥರು ಅಣಕು ಪ್ರದರ್ಶನದಲ್ಲಿ ಭಾಗಿಯಾಗದೇ ದೂರ ಉಳಿದರು. ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರದ ನೇತೃತ್ವದಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಮಾರ್ಗಸೂಚಿಯಂತೆ ಪ್ರತಿ ಎರಡು … [Read more...] about ಕೈಗಾದಲ್ಲಿ ಅಣಕು ಪ್ರದರ್ಶನ
Karwar News
ಭಾರತೀಯ ನೌಕಾನೆಲೆ ಪ್ರವೇಶಿಸಿದ ರಾಜ್ಯ ಶಾಸಕರು ಹಾಗೂ ಸಚಿವರು
ಕಾರವಾರ: ಭಾರತೀಯ ನೌಕಾನೆಲೆ ವೀಕ್ಷಣೆಗಾಗಿ ಶಾಸಕ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ಕಾರವಾರಕ್ಕೆ ಭೇಟಿ ನೀಡಿದೆ. ಶನಿವಾರ ಮದ್ಯಾಹ್ನ 12 ಗಂಟೆ ವೇಳೆಗೆ ನಾಲ್ಕು ಐಷಾರಾಮಿ ಬಸ್ಗಳಲ್ಲಿ ಜನಪ್ರತಿನಿಧಿಗಳು ನೌಕಾನೆಲೆ ಪ್ರವೇಶಿಸಿದರು. ಸಂಜೆ 7.40ರ ವರೆಗೂ ನೌಕಾನೆಲೆ ಕುರಿತು ಶಾಸಕರು ಅದ್ಯಯನ ನಡೆಸಿದರು. ಐ.ಎನ್.ಎಸ್ ಆದಿತ್ಯ ಯುದ್ದನೌಕೆಯಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ಸಂಚರಿಸಿದ ಶಾಸಕರು ಯುದ್ದನೌಕೆಯ ಕುರಿತು ಸಮಗ್ರ ಮಾಹಿತಿ ಪಡೆದರು. … [Read more...] about ಭಾರತೀಯ ನೌಕಾನೆಲೆ ಪ್ರವೇಶಿಸಿದ ರಾಜ್ಯ ಶಾಸಕರು ಹಾಗೂ ಸಚಿವರು
ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ಮೂರನೇ ಚಿತ್ರ ರಾಮ ರಾಮ ರೇ ದಿನಾಂಕ 19-11-2017ರಂದು
ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ಮೂರನೇ ಚಿತ್ರ ರಾಮ ರಾಮ ರೇ ದಿನಾಂಕ 19-11-2017ರಂದು ಬೆಳಿಗ್ಗೆ 10ಕ್ಕೆ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥಾ ಹಂತರವನ್ನು ಹೊಂದಿರುವ ರಾಮ ರಾಮ ರೇ ಚಿತ್ರವನ್ನು ಕನ್ನಡ ಕಲರ್ಸ್ ಸಿನಿಮಾಸ್ ಲಾಂಚನದಲ್ಲಿ … [Read more...] about ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ಮೂರನೇ ಚಿತ್ರ ರಾಮ ರಾಮ ರೇ ದಿನಾಂಕ 19-11-2017ರಂದು
ಅನಧಿಕೃತವಾಗಿ ನಿರ್ಮಾಣಗೊಂಡ ಸಭಾ ಭವನ ತೆರವಿಗೆ ಆಗ್ರಹ
ಕಾರವಾರ: ನಂದನಗದ್ದಾದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಪಾರ್ವತಿ ಶಂಕರ ಸಭಾ ಭವನ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ದೇವಾಲಯ ಸಮೀಪ ಪಾರ್ವತಿ ಶಂಕರ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಅನಧಿಕೃತವಾಗಿ ಸಭಾ ಭವನ ನಿರ್ಮಾಣ ಮಾಡಲಾಗಿದೆ. ಸರ್ವೆ ನಂ 166/2ರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿದ್ದು, 9ಮೀಟರ್ ರಸ್ತೆ ಬಿಡಬೇಕಿತ್ತು. ಆದರೆ, 3ಮೀಟರ್ ಮಾತ್ರ ರಸ್ತೆಗಾಗಿ ಜಾಗ ಬಿಡಲಾಗಿದೆ. ಇದರಿಂದ … [Read more...] about ಅನಧಿಕೃತವಾಗಿ ನಿರ್ಮಾಣಗೊಂಡ ಸಭಾ ಭವನ ತೆರವಿಗೆ ಆಗ್ರಹ
ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರನ ಸಾವು
ಕಾರವಾರ:ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೈತಖೋಲ್ದಲ್ಲಿ ನಡೆದಿದೆ. ಅವರ್ಸಾದ ಸಂದೇಶ ಗುನಗಾ (21) ಮೃತರು. ಕಾರವಾರಕ್ಕೆ ತೆರಳುತ್ತಿದ್ದ ವೇಳೆ ಬೈತಖೋಲ್ ಬಳಿ ವಾಹನವೊಂದು ಡಿಕ್ಕಿಯಾಗಿದೆ. ಈ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ವಾಹನದ ಗುರುತು ಸಿಕ್ಕಿಲ್ಲ. ಶೋಧ ಕಾರ್ಯ ನಡೆಸುತ್ತಿರುವದಾಗಿ ಸಂಚಾರ ಠಾಣೆ ಪಿಸೈ ಎನ್.ಡಿ ಬಿಕ್ಕಣ್ಣನವರ್ ತಿಳಿಸಿದರು. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರನ ಸಾವು


