ಕಾರವಾರ: ಬೈಕ್ ಸ್ಕಿಡ್ ಆದ ಪರಿಣಾಮ ಸಹ ಸವಾರ ಮೃತಪಟ್ಟ ಘಟನೆ ಅಮದಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಂಕೋಲಾ ಹೊಸಗದ್ದೆಯ ಅಕಿಲಾ ಅಣ್ವೇಕರ್ (49) ಮೃತರು. ತಮ್ಮ ಪತಿ ಶಂಕರ್ ಅಣ್ವೇಕರ್ ಜೊತೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಬೈಕ್ ನೆಲಕ್ಕೆ ಅಪ್ಪಳಿಸಿದ್ದು, ಹಿಂಬದಿ ಸವಾರರಾಗಿದ್ದ ಅಕಿಲಾ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅವರು ಮೃತಪಟ್ಟರು. ಶಂಕರ್ರ ಕೈ ಮೂಳೆ ಮುರಿದಿದೆ. ಗಾಯಾಳವುನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. … [Read more...] about ಬೈಕ್ ಸ್ಕಿಡ್: ಸವಾರ ಸಾವು
ಅಂಕೋಲಾ
ಧಾರಾಕಾರವಾಗಿ ಸುರಿದ ಮಳೆ
ಕಾರವಾರ: ಕರಾವಳಿ ಹಾಗೂ ಮಲೆನಾಡಿನಲ್ಲಿ ಸೋಮವಾರ ಮಳೆ ಸುರಿದಿದೆ. ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಧಾರಾಕಾರವಾಗಿ ಸುರಿಯಿತು. ಅಂಕೋಲಾ, ಕುಮಟಾ, ಕಾರವಾರ ನಗರ ಪ್ರದೇಶದಲ್ಲಿ ಮಳೆ ವ್ಯಾಪಕವಾಗಿತ್ತು. ಹೊನ್ನಾವರ ಹಾಗೂ ಭಟ್ಕಳ ಗ್ರಾಮೀಣ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯಿತು. ಮಳೆ ಹೆಚ್ಚಿದ್ದರಿಂದ ನದಿಗಳು ತುಂಬಿ ಹರಿದವು. ರಾಷ್ಟ್ರೀಯ ಹೆದ್ದಾರಿ ಇಕ್ಕೆರಡು ಬದಿಗಳಲ್ಲಿ ನೀರು ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಕಳೆದ 24 ಗಂಟೆಗಳ … [Read more...] about ಧಾರಾಕಾರವಾಗಿ ಸುರಿದ ಮಳೆ
ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥ ವೃದ್ಧ;ಜಿಲ್ಲಾಸ್ಪತ್ರೆಗೆ ದಾಖಲು
ಕಾರವಾರ:ಕಾಜುಬಾಗದ ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥರಾಗಿದ್ದ ವೃದ್ಧರೋರ್ವರನ್ನು ಗೌರಿ ಸಾಂತ್ವನ ಮಹಾದೇವ ಕೃಪಾ ಜನಸೇವಾ ಕೇಂದ್ರದ ಮುಖ್ಯಸ್ಥ ಶ್ರೀಕಾಂತ ನಾಯ್ಕ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಂಕೋಲಾ ಮೂಲದ ಶೇಖರ ಶೇಷು ನಾಯ್ಕ (65) ಎಂಬುವವರು ಅರ್ಜುನ ಟಾಕೀಸ್ನಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈಗ ಅವರಿಗೆ ವಯಸ್ಸಾದ ಕಾರಣ … [Read more...] about ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥ ವೃದ್ಧ;ಜಿಲ್ಲಾಸ್ಪತ್ರೆಗೆ ದಾಖಲು
ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆ;ಜನ ಜೀವನ ಅಸ್ಥವ್ಯಸ್ಥ
ಕಾರವಾರ:ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಜನ ಜೀವನ ಹಾಗೂ ಸಂಚಾರ ಅಸ್ಥವ್ಯಸ್ಥಗೊಂಡಿದೆ. ತಗ್ಗು ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮನೆಗಳ ಒಳಗೆ ನೀರು ನುಗ್ಗಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ. ಕರಾವಳಿಯಲ್ಲಿ ಶುಕ್ರವಾರದಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆಗೆ ಅಡ್ಡಲಾಗಿ ಮರ ಬೀಳುವದು, ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಕಾರವಾರದಿಂದ ಭಟ್ಕಳದ ವರೆಗೆ ರಾಷ್ಟ್ರೀಯ ಹೆದ್ದಾರಿ … [Read more...] about ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆ;ಜನ ಜೀವನ ಅಸ್ಥವ್ಯಸ್ಥ
ಗಾಳಿ, ಮಳೆಗೆ ಅಪಾರ ಹಾನಿ
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಮೂರು ನೂರಕ್ಕೂ ಅಧಿಕ ಮರಗಳು ಧರೆಗಪ್ಪಳಿಸಿದ್ದು, ಐದು ಜಾನುವಾರು ಮೃತಪಟ್ಟು ಕೊಟ್ಟಿಗೆ, ತೋಟ ಹಾಗೂ ಕೆಲ ಮನೆಗಳು ದ್ವಂಸಗೊಂಡಿದೆ. ಅರಣ್ಯ ಪ್ರದೇಶದಿಂದ ಕೂಡಿದ ಮಳಗಾಂ, ಸಾತನಬೈಲ್ ಮೊದಲಾದ ಕಡೆಗಳಲ್ಲಿ ಬುಧವಾರ ರಾತ್ರಿ ಬೀಕರ ಗಾಳಿ ಆವರಿಸಿದೆ. ಇದರ ಬೆನ್ನಲ್ಲೆ ಜೋರು ಮಳೆಯೂ ಸುರಿದಿದ್ದು, ಅರಣ್ಯದಲ್ಲಿನ ಮರಗಳು ನೆಲಕ್ಕೆ ಅಪ್ಪಳಿಸಿವೆ. ಸರಿ ಸುಮಾರು 5ಕಿ.ಮೀ … [Read more...] about ಗಾಳಿ, ಮಳೆಗೆ ಅಪಾರ ಹಾನಿ