ಹಳಿಯಾಳ:ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು ಇವು ದೀಪಾವಳಿ ಸಂದರ್ಭದಲ್ಲಿ ಹಬ್ಬದ ನೆಪ ಮಾಡಿ ಸಂಬಂಧ ಪಟ್ಟವರಿಂದ ಅಲಿಖಿತ ಹಾಗೂ ಅಕ್ರಮ ಪರವಾನಿಗೆ ಪಡೆದು ಕೊಟ್ಯಂತರ ರೂ ಅಕ್ರಮ ವ್ಯವಹಾರ ನಡೆಸಿ ಯುವಕರು, ಕಾರ್ಮಿಕರನ್ನು ಬೀದಿಗೆ ತಳ್ಳುವ ದಂಧೆಗೆ ಈಗಾಗಲೇ ಭರ್ಜರಿ ತಯಾರಿ ಹಳಿಯಾಳದಲ್ಲಿ ನಡೆದಿರುವ ಬಗ್ಗೆ ಪಟ್ಟಣದಲ್ಲಿ ಚರ್ಚೆಯಾಗುತ್ತಿದೆ. ಹಳಿಯಾಳದಲ್ಲಿ … [Read more...] about ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು
ಅಕ್ರಮ
34ಸಾವಿರ ರೂ ಮೌಲ್ಯದ ಸರಾಯಿ ವಶ
ಕಾರವಾರ: ಅಕ್ರಮ ಸರಾಯಿ ಮಾರಾಟಗಾರರು ಮಲ್ಲಾಪುರದ ಸಾರ್ವಜನಿಕ ಶೌಚಾಲಯದಲ್ಲಿ ಗೋವಾ ಮದ್ಯವನ್ನು ಬಚ್ಚಿಟ್ಟಿದ್ದರು. ಶೌಚಾಲಯದ ಮೇಲೆ ದಿಡೀರ್ ದಾಳಿ ನಡೆಸಿದ ಪೊಲೀಸರು 34ಸಾವಿರ ರೂ (ಗೋವಾ ದರ) ಮೌಲ್ಯದ ಸರಾಯಿಯನ್ನು ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಹಸ್ತಾಂತರಿಸಿದರು. ಇಲ್ಲಿನ ಲಕ್ಷ್ಮಿ ನಗರದಲ್ಲಿರುವ ಸಾರ್ವಜನಿಕ ಶೌಚಾಲಯ ಕಳೆದ ಹಲವು ವರ್ಷಗಳಿಂದ ಹಾಳು ಬಿದ್ದಿದೆ. ಕನಿಷ್ಟ ಮೂಲಭೂತ ಸೌಕರ್ಯವೂ ಇಲ್ಲದ ಕಾರಣ ಇದನ್ನು ಜನ ಬಳಸುತ್ತಿಲ್ಲ. ಹೀಗಾಗಿ ಶೌಚಾಲಯ ಅಕ್ರಮ … [Read more...] about 34ಸಾವಿರ ರೂ ಮೌಲ್ಯದ ಸರಾಯಿ ವಶ
ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಕಾರವಾರ:ಅಕ್ರಮವಾಗಿ ಚೀರೆಕಲ್ಲು ಸಾಗಿಸುತ್ತಿದ್ದ 6ಲಾರಿಗಳನ್ನು ತಹಶೀಲ್ದಾರ್ ಜಿ.ಎನ್ ನಾಯ್ಕ ವಶಕ್ಕೆ ಪಡೆದರು. ಬಿಣಗಾದಿಂದ ಅಮದಳ್ಳಿ ಕಡೆ ಚೀರೆಕಲ್ಲು ಸಾಗಾಟ ನಡೆಯುತ್ತಿತ್ತು. ಪ್ರತಿ ಲಾರಿಯಲ್ಲಿಯೂ 400ರಷ್ಟು ಚೀರೆಕಲ್ಲನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಚೀರೆಕಲ್ಲು ಸಮೇತ ಲಾರಿ ವಶಕ್ಕೆ ಪಡೆದರು. ನಂತರ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಲಾರಿ ಮಾಲಿಕರಿಂದ … [Read more...] about ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸಿದ್ದಾಪುರದ ಭಂಡಾರಕೇರಿ ಗ್ರಾಮದ ಬಂಗಾರೇಶ್ವರ ಮಂಜುನಾಥ ನಾಯ್ಕ ಎಂಬಾತ ಐದು ವರ್ಷಗಳ ಹಿಂದೆ ಇನ್ನೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಈ ವಿಚಾರವಾಗಿ ಪತ್ನಿ ಸುಶೀಲಾ ನಾಯ್ಕರೊಂದಿಗೆ ಜಗಳ ಉಂಟಾಗಿತ್ತು. ಇದೇ ಜಗಳ ತಾರಕ್ಕಕ್ಕೇರಿದಾಗ ಬಡಿಗೆಯಿಂದ ಹೊಡೆದು ಸುಶೀಲಾರನ್ನು ಬಂಗಾರೇಶ್ವರ ಮಂಜುನಾಥ ನಾಯ್ಕ ಕೊಲೆ ಮಾಡಿದ ಬಗ್ಗೆ 2012ರ ಡಿಸೆಂಬರ್ 4ರಂದು … [Read more...] about ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ
ಕಾರವಾರ:ಅಬಕಾರಿ ಇಲಾಖೆಯಲ್ಲಿನ ಅನುಪಯುಕ್ತ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು, ಬಹುತೇಕರು ಸಾರಿಗೆ ಅಧಿಕಾರಿಗಳು ನಿಗದಿ ಪಡಿಸಿದಕ್ಕಿಂತಲೂ ಕನಿಷ್ಟ ಬೆಲೆಗೆ ಹರಾಜು ಕೂಗಿದರು. ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ವಾಹನಗಳನ್ನು ಬಿಡುವದಿಲ್ಲ ಎಂದು ಅಬಕಾರಿ ಇಲಾಖೆಯವರು ಸ್ಪಷ್ಟ ಪಡಿಸಿದರು. ಆದರೂ ಮೂರು ಕಾಸಿನ ದರಕ್ಕೆ ಕೂಗುವವರ ಸಂಖ್ಯೆ ಕಡಿಮೆಯಿರಲಿಲ್ಲ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಜಿ.ಎಸ್.ಟಿ … [Read more...] about ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ