ಹೊನ್ನಾವರ ,ಜೀವನ ಒಂದು ರೈಲು ಪ್ರಯಾಣವಿದ್ದಂತೆ. ನಾವು ನಮ್ಮ ನಿಲ್ದಾಣ ಬಂದೊಡನೆ ಇಳಿದು ಹೋಗುತ್ತೇವೆ. ಈ ಪ್ರಯಾಣದಲ್ಲಿ ಒಳ್ಳೆಯವರನ್ನು, ಕೆಟ್ಟವರನ್ನು ಭೇಟಿ ಮಾಡುತ್ತೇವೆ. ನಮ್ಮ ಪ್ರವಾಸವನ್ನು ಸುಖಮಯವನ್ನಾಗಿಸುವುದು ನಮ್ಮಲ್ಲಿಯೇ ಇದೆ. ಸ್ವಯಂ ಸ್ಪೂರ್ತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ನಿವೃತ್ತ ಅಭಿಯಂತರ, ಶಿಕ್ಷಣ ಪ್ರೇಮಿಗಳಾದ ಪಿ. ಬಿ. ಶ್ಯಾನಭಾಗ ನುಡಿದರು. ಹೊನ್ನಾವರದ ಪುಟ್ಟ ಹಳ್ಳಿ ಕಾಸರಕೋಡಿನಲ್ಲಿ ಜನಿಸಿದ ನಾನು ಸಾಧನೆ ಮಾಡಲು ಸಹಕಾರಿಯಾದದ್ದು … [Read more...] about ಸ್ವಯಂ ಸ್ಪೂರ್ತಿಯಿಂದ ಸಾಧನೆ ಸಾಧ್ಯ – ಪಿ. ಬಿ. ಶ್ಯಾನಭಾಗ
ಆತ್ಮವಿಶ್ವಾಸ
ಸನ್ಮಾನಗಳು ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ -ನಾಗರಾಜ ನಾಯಕ ತೊರ್ಕೆ
ಸ್ವ ಶಕ್ತಿ ಯುವ ಬಳಗ, ಹಳ್ಕಾರ ಇವರ ಆಶ್ರಯದಲ್ಲಿ ಶಿಕ್ಷಕ ನಾರಾಯಣ ಮಹಾದೇವ ಗುನಗ ಇವರ ಸವಿನೆನಪಿಗಾಗಿ ಸ್ಪರ್ಧೆ-ಸನ್ಮಾನ ಹಾಗೂ ಸಂಭ್ರಮ ಎನ್ನುವ ವಿಶೇಷ ಕಾರ್ಯಕ್ರಮವನ್ನು ದಿನಾಂಕ 18/02/18 ರಂದು ಗುನಗನಕೊಪ್ಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಕಾರ್ಯಕ್ರಮವು … [Read more...] about ಸನ್ಮಾನಗಳು ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ -ನಾಗರಾಜ ನಾಯಕ ತೊರ್ಕೆ
ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆ
ಹೊನ್ನಾವರ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕøತಿ ಸಂಸ್ಕಾರ ಪರಿಸರ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆಯನ್ನು ಹೊನ್ನಾವರ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ವಿಭಾಗದವರಿಗೆ ‘ಜ್ಞಾನಸಿರಿ’ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಜ್ಞಾನ ಐಸಿರಿ’ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆ
ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ;ಪ್ರೋ. ಸುರೇಂದ್ರ. ದಫೇದಾರ
ಕಾರವಾರ: ಆತ್ಮವಿಶ್ವಾಸ, ಶಿಸ್ತು, ಧೃಡ ಸಂಕಲ್ಪದೊಂದಿಗೆ ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೋ. ಸುರೇಂದ್ರ. ದಫೇದಾರ ಹೇಳಿದರು. ದಿವೇಕರ ಪದವಿ ಪೂರ್ವ ಮಹಾವಿದ್ಯಾಲಯ ಆಯೋಜಿಸಿದ ತಾಲೂಕಾ ಮಟ್ಟದ ಪ್ರೌಢಶಾಲಾ ಮಕ್ಕಳ ಚರ್ಚಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಪ್ರಯತ್ನ ಮಾಡದೇ ಪ್ರತಿಫಲ ನಿರೀಕ್ಷಿಸುವದು ಸರಿಯಲ್ಲ. ವಿದ್ಯಾರ್ಥಿಗಳು ಪ್ರಯತ್ನವಾದಿಗಳಾಗಿರಬೇಕು. … [Read more...] about ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ;ಪ್ರೋ. ಸುರೇಂದ್ರ. ದಫೇದಾರ
ಒಗ್ಗಟ್ಟಿನಿಂದ,ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು;ವಿಶ್ವನಾಥ ನಾಯಕ
ಹೊನ್ನಾವರ : ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶ ಶರವೇಗದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ. ಇದರಿಂದ ಖಾಯಂ ಭಾರತ ದ್ವೇಷಿಸುವ ಪಾಕಿಸ್ತಾನ ಮತ್ತು ಇತ್ತೀಚೆಗೆ ಕಾಲು ಕೆದರುತ್ತಿರುವ ಚೀನಾಕ್ಕೆ ಹೊಟ್ಟೆಉರಿ ಉಂಟಾಗಿದೆ. ಆದ್ದರಿಂದ ಭಾರತೀಯರೆಲ್ಲರೂ ಹೆಚ್ಚು ಒಗ್ಗಟ್ಟಿನಿಂದ, ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹಿರಿಯ ಆರ್ಎಸ್ಎಸ್ ಕಾರ್ಯಕರ್ತ ವಿಶ್ವನಾಥ ನಾಯಕ ಹೇಳಿದರು. ಅವರು … [Read more...] about ಒಗ್ಗಟ್ಟಿನಿಂದ,ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು;ವಿಶ್ವನಾಥ ನಾಯಕ