ಹೊನ್ನಾವರ :ಹದವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಬಾರಿ ರೈತರಿಗೆ ಸಮಾಧಾನ ತಂದಿದೆ. ಹೀಗಾಗಿ ಅನ್ನದಾತ ಭೂಮಿ ಹದಗೊಳಿಸಿ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ಒಟ್ಟು 3,500 ಹೆಕ್ಟರ್ ಪ್ರದೇಶ ಮುಂಗಾರು ಕೃಷಿಗೆ ಸಜ್ಜುಗೊಂಡಿದೆ. 1,545 ಹೆಕ್ಟರ್ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯ ನಡೆಯುತ್ತಿದೆ. ರೈತನ ಅವಶ್ಯಕನುಗುಣವಾಗಿ ಬೇಡಿಕೆಯಂತೆ ರೈತ ಕೃಷಿಯಲ್ಲಿ ಜಯ ಸಿಕ್ಕಿದೆ. ಭತ್ತದ ಬೀಜ ಈ ಬಾರಿ … [Read more...] about ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕು
ಗೇರಸೊಪ್ಪಾ
ಆರ್. ಆರ್. ಸ್ಟೋರ್ಸ್ನಿಂದ ಗೇರಸೊಪ್ಪಾ ಪ್ರೌಢಶಾಲೆಗೆ ಕೊಡುಗೆ
ಹೊನ್ನಾವರ:ನಗರದ ಆರ್.ಆರ್.ಸ್ಟೋರ್ಸ್ನ ಮಾಲಿಕರಾದ ಮನೋಜ್ ಎಂ. ನಾಯ್ಕರವರು ಸರಕಾರಿ ಪ್ರೌಢಶಾಲೆ ಗೇರಸೊಪ್ಪಾಕ್ಕೆ ಉತ್ತಮ ದರ್ಜೆಯ 120 ನೋಟ್ಬುಕ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ವರ್ಷದ ಪ್ರತಿಭಾ ಪುರಸ್ಕಾರದ ತೃತೀಯ ಬಹುಮಾನದ ವಿಜೇತರಿಗೆ ಈ ನೋಟ್ಬುಕ್ ವಿತರಿಸಲಾಗಿದೆ ಮನೋಜ್ ನಾಯ್ಕ ರವರ ಈ ಸಹಾಯವನ್ನು ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕ/ಶಿಕ್ಷಕಿಯರು ಅಭಿನಂದಿಸಿದ್ದಾರೆ. … [Read more...] about ಆರ್. ಆರ್. ಸ್ಟೋರ್ಸ್ನಿಂದ ಗೇರಸೊಪ್ಪಾ ಪ್ರೌಢಶಾಲೆಗೆ ಕೊಡುಗೆ
ರಾಷ್ಟ್ರೀಯ ಹೆದ್ದಾರಿ ಸರಿಪಡಿಸಲು ಆಗ್ರಹ
ಹೊನ್ನಾವರ:ಹೊನ್ನಾವರ ಗೇರಸೊಪ್ಪಾ ತುಮಕೂರು ರಾಜ್ಯ ಹೆದ್ದಾರಿ ಕಳೆದ 10-15 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ಅಂತ ಪರಿವರ್ತನೆಗೊಂಡಿದೆ. ಆದರೆ ಈ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಇಂದಿಗೂ ಗ್ರಾಮಾಂತರ ರಸ್ತೆಗಿಂತಲೂ ಕನಿಷ್ಟವಾಗಿರುವುದು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ರಾತ್ರಿ ಹತ್ತಾರು ಬಸ್ಸುಗಳು ರಾಜ್ಯದ ರಾಜಧಾನಿ ಬೆಂಗಳೂರಿಗೆ ಓಡಾಡುತ್ತಲಿರುತ್ತದೆ. ಹಾಗೇ ಚಿಕ್ಕಮಗಳೂರು, ಮೈಸೂರು, … [Read more...] about ರಾಷ್ಟ್ರೀಯ ಹೆದ್ದಾರಿ ಸರಿಪಡಿಸಲು ಆಗ್ರಹ