ಹೊನ್ನಾವರ :
ಹದವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಬಾರಿ ರೈತರಿಗೆ ಸಮಾಧಾನ ತಂದಿದೆ. ಹೀಗಾಗಿ ಅನ್ನದಾತ ಭೂಮಿ ಹದಗೊಳಿಸಿ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲೂಕಿನಾದ್ಯಂತ ಒಟ್ಟು 3,500 ಹೆಕ್ಟರ್ ಪ್ರದೇಶ ಮುಂಗಾರು ಕೃಷಿಗೆ ಸಜ್ಜುಗೊಂಡಿದೆ. 1,545 ಹೆಕ್ಟರ್ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯ ನಡೆಯುತ್ತಿದೆ.
ರೈತನ ಅವಶ್ಯಕನುಗುಣವಾಗಿ ಬೇಡಿಕೆಯಂತೆ ರೈತ ಕೃಷಿಯಲ್ಲಿ ಜಯ ಸಿಕ್ಕಿದೆ. ಭತ್ತದ ಬೀಜ ಈ ಬಾರಿ 73,25 ಕ್ವಿಂಟಾಲ್ ಈಗಲೇ ಬಾರಿ ರೈತರಿಗೆ ಭತ್ತದ ಬೀಜ ವಿತರಿಸಲಾಗಿದ್ದು, ಸಾಮಾನ್ಯ ರೈತರಿಗೆ ಭತ್ತದ ಬೀಜಕ್ಕೆ ಪ್ರತಿ ಕೆ.ಜಿ.ಗೆ 8 ರೂ. ಪ್ರತಿ ಕೆ.ಜಿ.ಗೆ ಪ.ಜಾ/ಪ.ಪಂ ದ ರೈತರಿಗೆ 12 ರೂ. ಪ್ರತಿ ಕೆ.ಜಿ.ಗೆ ಸಬ್ಸಿಡಿ ನೀಡಲಾಗುತ್ತಿದೆ. ಮಳೆ ಪ್ರಮಾಣ ಜೂನ್ ಅಂತ್ಯದವರೆಗೆ 1286.3 ಮಿ.ಮೀ ಆಗಿದೆ. ವಾಡಿಕೆ ಮಳೆ 11691 ಆದರೆ 2016 ರಲ್ಲಿ ಮಳೆಯ ಪ್ರಮಾಣ 1568.6 ಮಿ.ಮೀ ಆಗಿತ್ತು. ಈ ವರ್ಷದ ವಾಡಿಕೆ ಮಳೆಯ ಪ್ರಮಾಣವು 3600.16 ಮಿ.ಮೀ ಆಗಿದೆ.
ಸೇವಾ ಸಹಕಾರಿ ಸಂಘ ಹಾಗೂ ತಾಲೂಕು ಮಾರ್ಕೇಟಿಂಗ್ ಸಂಘಗಳ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ಭತ್ತದ ಬೀಜವನ್ನು ನೀಡಲಾಗುತ್ತಿದೆ. ಮುಂಗಾರು ಭತ್ತದ ಕೃಷಿಯಲ್ಲಿ ನೇರ ಭಿತ್ತನೆ ಮತ್ತು ನಾಟಿ ಪದ್ದತಿ ಅನುಸರಿಸಲಾಗುತ್ತಿದೆ. ಹಳದೀಪುರ,ಕರ್ಕಿ,ಸಾಲಿಕೇರಿ, ಭಾಗದಲ್ಲಿ ವಿಶೇಷವಾಗಿ ಸಾಲು ನಾಟಿ ಪದ್ದತಿಯನ್ನು ಅನುಸರಿಸಿತ್ತಿದ್ದಾರೆ. ನಿರೀಕ್ಷಿಸಲಾಗುತ್ತದೆ. ಈಗಾಗಲೇ ಸುಮಾರು 50-60 ಎಕರೆ ಪ್ರದೇಶವಾದ ಮಂಕಿ, ಅನಂತವಾಡಿ, ಚಿತ್ತಾರ, ಹಳ್ಕಾರ, ಮೂಡ್ಕಣಿ, ಅಳ್ಳಂಕಿ, ಗೇರಸೊಪ್ಪಾ ಈ ಪ್ರದೇಶಗಳಲ್ಲಿ ಯಂತ್ರದ ಮೂಲಕ ಸಾಲು ನಾಟಿ ಕೃಷಿ ಚಟುವಟಿಕೆ ನಡೆಯುತ್ತಿದೆ.
——————————————————-
ಈ ಬಾರಿ ಕೃಷಿ ಚಟುವಟಿಕೆ ತುಂಬಾ ಅನುಕೂಲಕರವಾಗಿದೆ ರೈತರಿಗೆ ಈಗಾಗಲೇ ಭತ್ತದ ಬೀಜ ಹಾಗೂ ರಸಗೊಬ್ಬರಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ರೈತರ ಅವಶ್ಯಕತೆಗಳಿಗನುಗುಣವಾಗಿ ಬೇಡಿಕೆ ಪೂರೈಸಲು ಕಾಲಕಾಲಕ್ಕೆ ರೈತರಿಗೆ ಮಾರ್ಗದರ್ಶನ ನೀಡಲು ಇಲಾಖೆ ಸನ್ನದವಾಗಿದೆ.
ಕೃಷಿ ಸಹಾಯ ನಿರ್ದೇಶಕರು
ಜಯರಾಮ ಹೆಬ್ಬಾರ. ಹೊನ್ನಾವರ
Leave a Comment