ಹಳಿಯಾಳ: ಮನುಷ್ಯನ ದೇಹದಲ್ಲಿನ ಎಲ್ಲ ರೀತಿಯ ರೋಗಗಳಿಗೆ ಉತ್ತಮ ಪರಿಹಾರ ಎಂದು ಪದೇ ಪದೇ ಸಾಬಿತಾಗುತ್ತಿರುವ ಆರೋಗ್ಯ ರಕ್ಷಾ ಕವಚವಾದ ಯೋಗಾಭ್ಯಾಸವನ್ನು ಎಲ್ಲರೂ ತಮ್ಮ ಜೀವನದಲ್ಲಿ ರೂಢಿಸಿಕೊಂಡರೇ ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ರೋಗ ನಿವಾರಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಆದ್ದರಿಂದ ಎಲ್ಲರೂ ಯೋಗಾಭ್ಯಾಸದತ್ತ ಗಮನಹರಿಸುವಂತೆ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕರೆ ನೀಡಿದರು. ತಾಲೂಕಾ ಆಡಳಿತ, ತಾಲೂಕಾ ಪಂಚಾಯತಿ ಹಾಗೂ ಪುರಸಭೆ, … [Read more...] about ಆರೋಗ್ಯ ರಕ್ಷಾ ಕವಚವಾದ ಯೋಗಾಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು.. ತಹಶಿಲ್ದಾರ್ ವಿದ್ಯಾಧರ ಗುಳಗುಳಿ
Trending
ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಹಳಿಯಾಳ: ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್.ಘಟಕ, ದೇಶಪಾಂಡೆ ರುಡಸೆಟಿಯ ಸಹಯೋಗದೊಂದಿಗೆ ವಿಶ್ವ ಯೋಗದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತರಾಗಿ ಯೋಗ ದಿನದಲ್ಲಿ ಪಾಲ್ಗೊಂಡಿದ್ದರು. ಪತಂಜಲಿ ಯೋಗ ಶಿಕ್ಷಕರಾದ ಈರಣ್ಣಾ ಕಾಜಗಾರ, ಯೋಗ ಶಿಕ್ಷಕರಾಗಿ ಯೋಗದ ಪರಿಚಯ ಮಾಡಿಕೊಟ್ಟು ಹಲವಾರು ಆಸನಗಳ ಬಗ್ಗೆ ತಿಳಿಸಿದರು. ಕೆನರಾ ಬ್ಯಾಂಕ್ … [Read more...] about ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಉತ್ತರ ಕನ್ನಡ ಜಿಲ್ಲೆಯಲ್ಲಿಯ ಮಳೆ ಪ್ರಮಾಣ ಮತ್ತು ಜಲಾಶಯಗಳ ನೀರಿನ ಮಟ್ಟ
ಹಳಿಯಾಳ/ಕಾರವಾರ :ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 284.2 ಮಿ.ಮೀಮಳೆಯಾಗಿದ್ದು ಸರಾಸರಿ 25.8 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದ್ದು ಈವರೆಗೆ ಸರಾಸರಿ 526 ಮಿ.ಮೀ ಮಳೆ ದಾಖಲಾಗಿದೆ.ಈ ಅವಧಿಯಲ್ಲಿ ಅಂಕೋಲಾ ದಲ್ಲಿ 68 ಮಿ.ಮೀ, ಭಟ್ಕಳ 40 ಮಿ.ಮೀ, ಹಳಿಯಾಳ 4.4 ಮಿ.ಮೀ, ಹೊನ್ನಾವರ 44.7 ಮಿ.ಮೀ, ಕಾರವಾರ 24.2 ಮಿ.ಮಿ, ಕುಮಟಾ 43.4 ಮಿ.ಮೀ, ಮುಂಡಗೋಡ 19.6 ಮಿ.ಮೀ,ಸಿದ್ದಾಪುರ 19 … [Read more...] about ಉತ್ತರ ಕನ್ನಡ ಜಿಲ್ಲೆಯಲ್ಲಿಯ ಮಳೆ ಪ್ರಮಾಣ ಮತ್ತು ಜಲಾಶಯಗಳ ನೀರಿನ ಮಟ್ಟ
ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ
ಹಳಿಯಾಳ: ದಿ.21 ರಂದು ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗಿನ ಜಾವ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬುಧವಾರ ಪಟ್ಟಣದಲ್ಲಿ ಯೋಗದಿನ ಕುರಿತು ಜಾಗೃತಿ ಜಾಥಾ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಮಿನಿ ವಿಧಾನಸೌಧದಿಂದ ತಾಲೂಕಾಡಳಿತ, ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಮಹಿಳಾ ಸಂಘ, ಪತಂಜಲಿ ಯೋಗಶಿಬಿರದವರು, ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದ ಯೋಗ ಜಾಗೃತಿ ಜಾಥಾ ಪಟ್ಟಣದ ಪ್ರಮುಖ … [Read more...] about ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ
ಹಳಿಯಾಳ ಠಾಣೆ ಮುಖ್ಯಪೇದೆ ಎಸ್.ಡಿ.ನಧಾಪ್ ನಿಧನ
ಹಳಿಯಾಳ:- ಸ್ಥಳಿಯ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಡಿ.ನಧಾಪ್(50) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.20ಎಚ್.ಎಲ್.ವೈ-2: ಅನಾರೋಗ್ಯದಿಂದ ನಿಧನರಾದ … [Read more...] about ಹಳಿಯಾಳ ಠಾಣೆ ಮುಖ್ಯಪೇದೆ ಎಸ್.ಡಿ.ನಧಾಪ್ ನಿಧನ



