ಹೊನ್ನಾವರ:
ಪ್ರಭಾತನಗರದ ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯ ದ್ವಿತಿಯ ವಾರ್ಷಿಕ ಸ್ನೇಹ ಸಮ್ಮೇಳನ ಪಟ್ಟಣದ ಲಯನ್ಸ ಕ್ಲಬ್ ಸಭಾಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯೋಗರತ್ನ ಪ್ರಶಸ್ತಿ ಪುರಸ್ಕøತ ಉದ್ಯಮಿ ಯಶೋಧರ ನಾಯ್ಕ ಮಾತನಾಡಿ `ಸಂಘಟನೆಯ ಮೂಲಕ ಸೌಹಾರ್ದತೆ ಮತ್ತು ಅಭಿವೃದ್ಧಿ ಸಾಧ್ಯವಾಗುವುದು. ಸ್ನೇಹ, ಸೌಹಾರ್ದತೆಯೊಂದಿಗೆ ತಮ್ಮ ಪರಿಸರದ ಅಭಿವೃದ್ದಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯವರು ಸಂಘಟನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಮರಗಿಡಗಳನ್ನು ಬೆಳೆದು ಉತ್ತಮ ನಿರ್ಮಾಣವಾಗುವಂತಾಗಬೇಕು ಎಂದು ಹೇಳಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪಿಎಸ್ಐ ಆನಂದಮೂರ್ತಿ ಮಾತನಾಡಿ `ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಚಂದ್ರಯಾನವನ್ನೂ ಮಾಡಿದ್ದಾನೆ, ಆದರೆ ಅಕ್ಕಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದನ್ನು ಗುರುತಿಸಲು ವಿಫಲನಾಗಿದ್ದಾನೆ. ನಮ್ಮ ಸುತ್ತಮುತ್ತಲಿನ ಜನರ ಬಗ್ಗೆ, ಪರಿಸರದ ಬಗ್ಗೆ ಅರಿವು, ಪ್ರೀತಿ, ವಿಶ್ವಾಸವನ್ನು ಹೊಂದಬೇಕಾಗಿದೆ. ಸ್ನೇಹ ಸಮ್ಮೇಳನದ ಮೂಲಕ ಇದು ಸಾಧ್ಯವಾಗುತ್ತಿದೆ ಎಂದರು.
ಕನ್ನಡಪರ ಸಂಘಟನೆಯ ಸತ್ಯ ಜಾವಗಲ್ ಮಾತನಾಡಿ, ಹಲವಾರು ಮೂಲಭೂತ ಸಮಸ್ಯೆಗಳನ್ನು ಹೊಂದಿರುವ ಕಾಲನಿಯಲ್ಲಿ ಯಶೋಧರ ನಾಯ್ಕ ಸೇರಿದಂತೆ ಅನೇಕ ಗಣ್ಯರ ಭೇಟಿಯಿಂದ ಸಮಸ್ಯೆಗಳು ಬಗೆಹರಿಯಲು ಸಾಧ್ಯವಾಗುತ್ತಿದೆ ಎಂದರು.
ವೈದ್ಯ ಆಶಿಕ್ ಹೆಗ್ಡೆ, ಅರಣ್ಯ ನೌಕರರ ವಸತಿ ಸಹಕಾರ ಸಂಘದ ಅಧ್ಯಕ್ಷೆ ಮೋಹಿನಿ ನಾಯ್ಕ, ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ್, ಲಯನ್ಸ್ ಕ್ಲಬ್ ಅಧ್ಯಕ್ಷ ಶೇಖರ್ ನಾಯ್ಕ ಮಾತನಾಡಿದರು. ಅರಣ್ಯಾಧಿಕಾರಿ ಪ್ರಭಾಕರ ನೇವಿಗೆ, ಪರಿಸರ ಪ್ರೇಮಿ ನಾರಾಯಣ ಎಂ. ಸಂಕೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಜಿ.ವಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಜಿ.ಜಿ.ಶಂಕರ ಸ್ವಾಗತಿಸಿದರು. ಆರ್.ಟಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನವೀನ ಮೇಸ್ತ ವಂದಿಸಿದರು. ಅನಿತಾ ಪ್ರಾರ್ಥಿಸಿದರು. ಉದಯ ನಾಯ್ಕ, ಎಂ.ಡಿ.ನಾಯ್ಕ, ಸಾಧನಾ ಬರ್ಗಿ, ಬಿ.ಎಂ.ಭಟ್ ನಿರ್ವಹಿಸಿದರು. ನಂತರ ಶಿರಸಿಯ ಸಂಜನಾ ಡಾನ್ಸ್ ಗ್ರೂಪ್ ಇವರಿಂದ ವಿಶಿಷ್ಟ ಗಾಯನ, ನೃತ್ಯ, ಹಾಸ್ಯ ಕಾರ್ಯಕ್ರಮ ನಡೆಯಿತು.
Leave a Comment