ಹೊನ್ನಾವರ:
ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗದಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಿಂದ ಹೊರಗೆ ಹೋದ ತಾಲೂಕಿನ ಗುಡ್ಡೇಬಾಳದ ಮಂಜುನಾಥ ಸುಬ್ರಹ್ಮಣ್ಯ ಹೆಗಡೆ (33) ಎಂಬುವವರು ಕಾಣೆಯಾಗಿದ್ದಾನೆ.
ಕಾಣೆಯಾದ ವ್ಯಕ್ತಿಯ ಪತ್ನಿ ಸಂಧ್ಯಾ ಮಂಜುನಾಥ ಹೆಗಡೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮಂಜುನಾಥ ಹೆಗಡೆ ಇಂಜಿನಿಯರ್ ಆಗಿದ್ದು ಬೆಂಗಳೂರಿನಿಂದ ಕಳೆದ ಫೆ. 26 ರಂದು ಮನೆಗೆ ಬಂದಿದ್ದರು. ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗದಿರುವುದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಅವರು ಕಳೆದ ಮಾರ್ಚ 3 ರಂದು ಬೆಳಿಗ್ಗೆ ತನ್ನ ತಂದೆ ತಾಯಿ ಇರುವ ಹಿರೇಬೈಲ್ನ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಅಲ್ಲಿಗೂ ಹೋಗದೇ, ತಿರುಗಿ ಮನೆಗೂ ಬಾರದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Leave a Comment