ಹೊನ್ನಾವರ :
ತಾಲೂಕಿನ ಮಂಕಿ ಗ್ರಾಮಪಂಚಾಯತ್ ಲೆಕ್ಕ ಸಹಾಯಕನ ಮೇಲೆ ಸ್ಥಳೀಯರೊಬ್ಬರು ಹಲ್ಲೆ ಎಸಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಜೊತೆ ಜೀವಬೆದರಿಕೆ ಹಾಕಿರುವ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾ.ಪಂ. ಲೆಕ್ಕಸಹಾಯಕ ನಾಗಪ್ಪ ಬೀರಾದಾರ ಪಾಟೀಲ್ ಎಂಬುವರು ತಮ್ಮ ಮೇಲಾದ ಹಲ್ಲೆ ಕುರಿತು ದೂರು ನೀಡಿದ್ದು, ಮಂಕಿ ದಾಸನಮಕ್ಕಿಯ ತುಕಾರಾಮ ಮಂಜುನಾಥ ನಾಯ್ಕ ಎಂಬುವರು ಹಲ್ಲೆ ಎಸಗಿರುವುದಾಗಿ ಆರೋಪಿಸಿದ್ದಾರೆ.
ಗ್ರಾ.ಪಂ. ಕಾರ್ಯಾಲಯದಲ್ಲಿ ಕರ್ತವ್ಯದಲ್ಲಿರುವ ವೇಳೆ ಆಗಮಿಸಿದ ತುಕಾರಾಮ ಇವರು ತಮ್ಮ ಬಳಿ ಬಂದು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಯಾಗಿ ಮಾಹಿತಿ ನೀಡಿ ಹೆಚ್ಚಿನ ಮಾಹಿತಿಗೆ ಪಿಡಿಓರವರನ್ನು ಕೇಳಬೇಕು ಎಂದ ವೇಳೆ ಸಿಟ್ಟಿಗೆದ್ದು ಕೆನ್ನೆಗೆ ಬಾರಿಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಮಂಕಿ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Leave a Comment