ಕಾರವಾರ:
ಹರಪನಹಳ್ಳಿಯ ಮಹಿಳಾ ಕಲಾವಿದರು ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ ಬಯಲಾಟ ಏಕಲವ್ಯ ಗಮನ ಸೆಳೆಯಿತು.
ಸಮಸ್ತರು ಸಾಂಸ್ಕøತಿ ಸಂಘ ಹರಪನಹಳ್ಳಿಯ ಮಹಿಳಾ ಕಲಾವಿದರು ಏಲಕವ್ಯ ಬಂiÀiಲಾಟ ಪ್ರದರ್ಶಿಸುವ ಮೂಲಕ ಕರಾವಳಿಯ ಜನತೆಗೆ ಬಯಲಾಟದ ಮೂಲ ನೆಲದ ಕಲೆಯನ್ನು ಪರಿಚಯಿಸಿದರು. ಜಿಲ್ಲಾಡಳಿತ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ರವೀಂದ್ರನಾಥ ಟ್ಯಾಗೋರ ಅಭಿವೃದ್ಧಿ ಸಮಿತಿ, ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು.
ವಿಶಿಷ್ಟ ಕುಣಿತ ಮತ್ತು ವಿಶೇಷ ಜಾನಪದ ಸಂಗೀತ ಹಿನ್ನೆಲೆಯ ಬಯಲಾಟದ ಏಕಲವ್ಯ ಡಾ.ಸಿದ್ದಲಿಂಗಯ್ಯ ಅವರ ವೈಚಾರಿಕತೆಯಲ್ಲಿ ರಚನೆಯಾದುದು. ಈ ನಾಟಕವನ್ನು ಬಯಲಾಟದ ಪ್ರಕಾರಕ್ಕೆ ದುಡಿಸಿಕೊಂಡವರು ನಿರ್ದೇಶಕ ಬಿ.ಪರುಶುರಾಮ. ನಾಟಕದಲ್ಲಿ ದ್ರೋಣನ ಪಾತ್ರ ಮಾಡಿದ ಏಕೈಕ ಪುರುಷ ಕಲಾವಿದೆ. ಉಳಿದಂತೆ ಏಕಲವ್ಯ ಪಾತ್ರವನ್ನು ಸವಿತಾ, ಅರ್ಜುನನ ಪಾತ್ರವನ್ನು ಶಿಲ್ಪಾ ಮೈದೂರು, ಕೃಷ್ಣನ ಪಾತ್ರವನ್ನು ಶ್ವೇತಾ ಹರಪನಹಳ್ಳಿ, ಕರ್ಣ, ದುರ್ಯೋಧನ ಭೀಮ, ಬೇಡ ಜನರ ಪಾತ್ರಗಳು ಸೇರಿದಂತೆ ಉಳಿದೆಲ್ಲಾ ಪಾತ್ರಗಳನ್ನು ಯುವತಿಯರು ನಿರ್ವಹಿಸಿದರು.
ವಿದ್ಯೆ ಎಂಬುದು ಶೂದ್ರ ವರ್ಗಕ್ಕೆ ದೂರವೇ ಆಗಿದ್ದ ಕಾಲದಲ್ಲಿ ದ್ರೋಣಾಚಾರ್ಯರ ಅರ್ಜುರ್ನನ ಕರ್ಣರಿಗೆ ಕಲಿಸುವ ಬಿಲ್ವ ವಿದ್ಯೆಯ ದೂರದಿಂದಲೇ ಗ್ರಹಿಸಿದ ಏಕಲವ್ಯ ದ್ರೋಣಚಾರ್ಯ ಮೆಚ್ಚುವಂತ ಶಿಷ್ಯನಾದ. ಬಿಲ್ವ ವಿದ್ಯೆ ಎಂಬುದು ಸಮುದಾಯ ಮತ್ತು ಕಾಡಿನ ರಕ್ಷಣೆಗೆ ಎಂದು ನಂಬಿದವನು ಏಕಲವ್ಯ, ಕೌರವ ಮತ್ತು ಪಾಂಡವರ ಆಡಳಿತ ಮತ್ತು ಅಧಿಕಾರ ದಾಹಕ್ಕೆ ಹಾಗೂ ಹಿತಾಸಕ್ತಿಗೆ ನಾನು ದಾಳವಾಗಲಾರೆ ಎಂಬ ಮಾತನ್ನು ಏಕಲವ್ಯ ಆಡುವ ಮೂಲಕ ನಾಟಕದ ಮೂಲ ಉದ್ದೇಶವನ್ನು ಹಾಗೂ ಸಂದೇಶವನ್ನು ಈ ಬಯಲಾಟ ನೀಡಿತು. ಒಂದು ಶೋಷಿತ ಜನಾಂಗ ಸಹ ಪ್ರಯತ್ನದಿಂದ ಮುಂದೆ ಬರಬಹುದು. ಯಾವುದೇ ವಿದ್ಯೆಯಾಗಲಿ ಯಾವ ಜನಾಂಗದ ಸ್ವತ್ತು ಅಲ್ಲ. ವಿದ್ಯೆಯನ್ನು ಸಮುದಾಯದ ಬೆಳವಣಿಗೆಗೆ ಬಳಸಬೇಕು. ಹಾಗೂ ಯಾವುದೇ ಜನಾಂಗದ ಸಾಧಕರನ್ನು ಆಯಾ ಜಾತಿಯ ನೆಲೆಯಲ್ಲಿ ನೋಡದೇ ಅವರು ಹೇಳಿದ ಸಂದೇಶ ಮತ್ತು ಜೀವನ ವಿಧಾನವನ್ನು ಸಮುದಾಯಕ್ಕೆ ನೀಡಬೇಕು ಎಂಬ ಜಾಗೃತಿಯನ್ನು ಈ ಬಯಲಾಟ ಸಾರಿತು. ಸಮಸ್ತರು ಹರಪನಹಳ್ಳಿ ಹವ್ಯಾಸಿ ನಾಟಕ ತಂಡ ಬಯಲಾಟ ಪ್ರಕಾರವನ್ನು ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಬಯಲಾಟ ಪ್ರಕಾರವನ್ನು ಮತ್ತೆ ಜೀವಂತವಾಗಿ ಇಡಲು ಈ ಸಂಚಾರವನ್ನು ಆರಂಭಿಸಿದ್ದು, ಕಾರವಾರದಲ್ಲಿ ತನ್ನ ಎರಡನೇ ಪ್ರದರ್ಶನವನ್ನು ನೀಡಿತು.
ಅಪರೂಪಕ್ಕೆ ನಡೆದ ಬಯಲಾಟದ ಸವಿಯನ್ನು ಕರಾವಳಿಯ ಜನತೆ ಸಂಭ್ರಮ ಮತ್ತು ಕುತೂಹಲದಿಂದಲೇ ವೀಕ್ಷಿಸಿದರು. ಬಯಲಾಟದ ವೇಷಭೂಷಣ ಮತ್ತು ಹಾಡುಗಳ ಬಗ್ಗೆ , ಹೆಜ್ಜೆ ಹಾಕುವ ಬಗೆಯ ಕುರಿತು ಪ್ರಶಂಸೆ ವ್ಯಕ್ತವಾಯಿತು.
Leave a Comment