ದಾಂಡೇಲಿ :
ನಗರದ ಹಳಿಯಾಳ ರಸ್ತೆಯಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಬಿಲ್ ಪಾವತಿಸಲು ಈಗಾಗಲೆ ಎರಡು ಕೌಂಟರ್ ಗಳನ್ನು ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಅನೂಕೂಲತೆಗಾಗಿ ಅಂಬೇವಾಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಡಿವಿಜನಲ್ ಕಚೇರಿಯಲ್ಲಿ ಕೂಡ ಒಂದು ಕೌಂಟರನ್ನು ಸ್ಥಾಪಿಸಲಾಗುವುದೆಂಬ ಭರವಸೆಯನ್ನು ಶಿರಸಿಯ ಹೆಸ್ಕಾಂನ ಅಧಿಕ್ಷಕ ಅಭಿಯಂತರ ನರಸಿಂಹಮೂರ್ತಿ ತಿಳಿಸಿದರು.
ಅವರು ಸ್ಥಳಿಯ ಹೆಸ್ಕಾಂನ ಕಚೇರಿಯಲ್ಲಿ ಕರೆಯಲಾದ ಹೆಸ್ಕಾಂನ ಗ್ರಾಹಕರ ಕಚೇರಿಯಲ್ಲಿ ಗ್ರಾಹಕರ ಸಮಸ್ಯೆಗಳನ್ನು ಆಳಿಸಿ ಮಾತನಾಡಿದರು. ಬಿಲ್ಲಿನಲ್ಲಿ ಕೆಲವು ತೆರಿಗೆಗಳನ್ನು ಸೇರಿಸಿರುವ ಬಗ್ಗೆ ಮೀಟರನಲ್ಲಿ ಕೆಲಸ ರಿಡಿಂಗ್ ನಲ್ಲಿ ವ್ಯತ್ಯಾಸ ಕಂಡು ಬಂದರೆ ಸಮಯಾವಕಾಶ ನೀಡಿದರೆ ಹೊಸ ಮೀಟರ್ ಕೂಡಿಸಿ ಬದಲಾವಣೆ ಮಾಡಿ ಕೊಡಲಾಗುವುದರ ಬಗ್ಗೆ ಮಾಹಿತಿ ನೀಡಲಾಯಿತು.
ಎಲ್.ಇ.ಡಿ ಬಲ್ಪ್ ವಿತರಣೆ ಪುನ ಆರಂಭಿಸಬೇಕೆಂಬ ಮತ್ತು 3 ವರ್ಷದ ಗ್ಯಾರಂಟಿ ಅವಧಿಯಲ್ಲಿ ಹಾಳಾದ ಬಲ್ಪ್ಗಳನ್ನು ಬದಲಿ ಮಾಡಿ ಹೊಸ ಬಲ್ಪ್ ದೊರಕಿಸಿ ಕೊಡಬೇಕೆಂಬ ಪ್ರಶ್ನೆಗೆ ಈ ಕುರಿತು ಕ್ರಮ ಕೈಕೊಳ್ಳುವ ಭರವಸೆಯನ್ನು ನರಸಿಂಹಮೂರ್ತಿ ನೀಡಿದರು.
ನಗರದಲ್ಲಿ ಡಿವಿಜನಲ್ ಕಚೇರಿ ಆರಂಭಗೊಳ್ಳುವುದರಿಂದ ಸ್ಥಳಿಯ ಹಾಗು ಹಳಿಯಾಳದ ಗ್ರಾಹಕರು ಇನ್ನೂ ಮುಂದೆ ಶಿರಸಿಯ ಹೆಸ್ಕಾಂ ಕಚೇರಿಗೆ ಹೋಗುವ ಬದಲು ದಾಂಡೇಲಿಯಲ್ಲಿಯೆ ಬಹುತೇಕ ಎಲ್ಲ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯ ಇದರಿಂದ ಹಳಿಯಾಳ ದಾಂಡೇಲಿ ಜನರಿಗೆ ಹೆಚ್ಚಿನ ಅನಕೂಲತೆ ಆಗಲಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.
ಸ್ಥಳೀಯ ಹೆಸ್ಕಾಂನ ಸಹಾಯಕ ಅಭಿಯಂತರ ಪುರುಷೋತ್ತಮ ಮಲ್ಯಾ, ಅಧಿಕಾರಿಗಳಾದ ಪ್ರಾಣೇಶ ಎಂ, ಕುಮಾರ ಕೆ ಸಭೆ ನಡೆಸಿಕೊಟ್ಟರು.
ಚರ್ಚೆಯÀಲ್ಲಿ ಹಿರಿಯ ನಾಗರಿಕ ವೇದಿಕೆಯ ವಿ.ಎ. ಕೋನಾಪುರೆ, ಆರ್.ಜಿ ಶೆಟ್ಟಿ, ಸತ್ಯಣ್ಣಾ, ಕಿರಣ, ನಿವೃತ್ತ ಪ್ರಾಂಶಪಾಲ ಯು.ಎಸ್. ಪಾಟೀಲ್ ಇತರರು ಭಾಗವಹಿಸಿದ್ದರು.
ಸಂವಾದ ಸಭೆಯಲ್ಲಿ ಗ್ರಾಹಕರು ಕೆಲವರು, ಸಿಬ್ಬಂದಿಗಲು ಹಲವರು :
ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದ್ದ ಸಭೆಯಲ್ಲಿ ಇಲಾಖೆಯ ಸಿಬ್ಬಂದಿಗಳೆ ಅಧಿಕ ಸಂಖ್ಯೆಯಲ್ಲಿ ಇದ್ದದ್ದು ವಿಶೇಷವಾಗಿತ್ತು. ಸಭೆಯ ಬಗ್ಗೆ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಸಭೆಯ ಬಗ್ಗೆ ಸರಿಯಾದ ಜಾಗೃತಿ ಮೂಡಿಸದಿರುವುದೆ ಗ್ರಾಹಕರ ಸಂಖ್ಯೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಅಥವಾ ಇಲಾಖೆಯ ಕೆಲವೊಂದು ಬಣ್ಣ ಬಯಲಾಗಬಹುದೆಂಬ ಉದ್ದೇಶದಿಂದ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸುವಂತೆ ಮಾಡಲು ಹೆಸ್ಕಾಂ ಅಧಿಕಾರಿಗಳು ಅಸಕ್ತಿ ವಹಿಸಲ್ಲವೆ ಎಂಬ ಪ್ರಶ್ನೆ ಹೆಸ್ಕಾಂ ಇಲಾಖೆಯ ಮೇಲಿದೆ.
Leave a Comment