ಕಾರವಾರ:
ಜೂನ್ 21 ರಂದು ಆಚರಿಸಲಾಗುವ 3 ನೇ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಯೋಗಮಯ ಕರ್ನಾಟಕ ಅಭಿಯಾನವನ್ನು ಆರಂಭಿಸಲಾಗಿದ್ದು ಜಿಲ್ಲೆಯಲ್ಲಿ ಯೋಗಮಯ ಉತ್ತರಕನ್ನಡ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಬಗ್ಗೆ ಸುದ್ದಿಗೊಷ್ಟಿ ನಡೆಸಿ ವಿವರ ನೀಡಿದ ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ, ಅಭಿಯಾನದ ಅಂಗವಾಗಿ ಯೋಗ ಶಿಬಿರ, ಯೋಗ ಶಿಕ್ಷಕರ ತರಬೇತಿ ಶಿಬಿರ, ಬೊಜ್ಜು ನಿವಾರಣಾ ಶಿಬಿರ, ಮಧುಮೇಹ ನಿಯಂತ್ರಣ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಪ್ರತಿಯೊಂದು ಹೋಬಳಿ, ಗ್ರಾಮ ಹಾಗೂ ತಾಲೂಕಾ ಮಟ್ಟದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಅವರು ರಾಜ್ಯದೆಲ್ಲೆಡೆ ಪ್ರಾರಂಭಿಸುತ್ತಿರುವ ಈ ಅಭಿಯಾನದಲ್ಲಿ ಯೋಗ ಶಿಕ್ಷಕರಾಗಲು ಬಯಸುವವರು ಉಚಿತವಾಗಿ ತರಬೇತಿ ಪಡೆಯಬಹುದಾಗಿದೆ. ಪ್ರಾತಃ ಕಾಲದ ಎರಡು ಘಂಟೆ ಅವಧಿಯನ್ನು ಯೋಗಾಭ್ಯಾಸಕ್ಕಾಗಿ ಮೀಸಲಿಡಲು ಆಸಕ್ತಿ ಉಳ್ಳವರು ಯೋಗ ಶಿಕ್ಷಕರಾಗಬಹುದು. ಜಿಲ್ಲೆಯ ಕುಮಟಾ, ಅಂಕೋಲಾ, ಕಾರವಾರ ತಾಲೂಕುಗಳಲ್ಲಿ ಮೇ 5 ರಿಂದ ತರಬೇತಿ ಶಿಬಿರಗಳನ್ನು ಆರಂಭಿಸಲಾಗಿದ್ದು ತಿಂಗಳ ಅಂತ್ಯದ ವರೆಗೆ ನಡೆಯಲಿದೆ. ಪ್ರಸ್ತುತ ಜಿಲ್ಲಾ ಕೇಂದ್ರಗಳಲ್ಲಿ ನೀಡಲಾಗುತ್ತಿರುವ ಈ ತರಬೇತಿಯು ಶೀಘ್ರದಲ್ಲಿಯೇ ತಾಲೂಕು ಕೇಂದ್ರಗಳಲ್ಲಿಯೂ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ತರಬೇತಿ ಪಡೆದ ವ್ಯಕ್ತಿಗಳಲ್ಲಿ ಅರ್ಹರನ್ನು ಸಂಸ್ಥೆಯು ಯೋಗ ಶಿಕ್ಷಕರನ್ನಾಗಿ ನೇಮಿಸಿ ಕೊಳ್ಳಲಿದೆ. ಮುಂದೆ ಅವರು ತಮ್ಮ ಪ್ರದೇಶಗಳಲ್ಲಿ ನಿತ್ಯವೂ ತಮ್ಮ ಯೋಗಾಭ್ಯಾಸದ ಜೊತೆಗೆ ಸಾರ್ವಜನಿಕರಿಗೂ ಉಚಿತವಾಗಿ ಹೇಳಿ ಕೊಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ನೆರವಾಗಲಿದ್ದಾರೆ. ಯೋಗ ಶಿಕ್ಷಕರಿಗಾಗಿ ಬೆಳಿಗ್ಗೆ 5 ರಿಂದ 7 ರವರೆಗೆ ತರಬೇತಿ ನೀಡಲಾಗುತ್ತಿದೆ. ಕುಮಟಾ ಬಗ್ಗೋಣದ ಸರಸ್ವತಿ ವಿದ್ಯಾಕೇಂದ್ರ, ಅಂಕೋಲಾದ ಅರ್ಬನ್ ಬ್ಯಾಂಕ್ ಹಾಲ್, ಕಾರವಾರ ಬಾಡದ ನ್ಯೂ ಹೈಸ್ಕೂಲ್ನಲ್ಲಿ ತರಬೇತಿ ನಡೆಸಲಾಗುತ್ತಿದ್ದು, ಆಸಕ್ತರು ಭಾಗವಹಿಸ ಬಹುದು ಎಂದು ಮಾಹಿತಿ ನೀಡಿದರು.
ಜೂನ್ 21 ರಂದು ಗುಜರಾತಿನ ಅಹಮದಾಬಾದ್ನಲ್ಲಿ ಆಯೋಜಿಸಲಾಗಿರುವ 3 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಬಾ ರಾಮ್ದೇವ್ ಅವರು ಭಾಗವಹಿಸಲಿದ್ದಾರೆ. ಅವರೊಂದಿಗೆ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿ, ಯೋಗಾಭ್ಯಾಸ ಮಾಡಲಿದ್ದಾರೆ ಎಂದು ಹೇಳಿದರು. ರಾಜ್ಯದ ಸರಕಾರಿ ಶಾಲಾ ದೈಹಿಕ ಶಿಕ್ಷಕರಿಗೆ ಉಚಿತವಾಗಿ ಯೋಗ ತರಬೇತಿಯನ್ನು
Leave a Comment