ಹೊನ್ನಾವರ;
ತಾಲೂಕಿನ ಜನತಾ ವಿದ್ಯಾಲಯ ಕಾಸರಕೋಡ, ಶಾಲೆಯು ಈ ವರ್ಷ ಎಸ್.ಎಸ್.ಎಲ್.ಸಿಯಲ್ಲಿ 93.61% ಫಲಿತಾಂಶವನ್ನು ಪಡೆದು ತಾಲೂಕಿಗೆ ಉತ್ತಮ ಸ್ಥಾನವನ್ನುಗಳಿಸಿಕೊಂಡಿದೆ. ಪರೀಕ್ಷೆಗೆ ಕುಳಿತ 47 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ ಉನ್ನತ ಶ್ರೇಣಿ ಸಹಿತ ಪ್ರಥಮ ದರ್ಜೆ 8 ವಿದ್ಯಾರ್ಥಿಗಳು, ಪ್ರಥಮ ದರ್ಜೆ 24, ದ್ವಿತೀಯ ದರ್ಜೆಯಲ್ಲಿ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ, ಶರತ ಸುಬ್ರಾಯ ನಾಯ್ಕ 579/625 ಅಂಕದೊಂದಿಗೆ 92.64% ಫಲಿತಾಂಶ ಪಡೆದು ಶಾಲೆಗೆ ಮೊದಲ ಸ್ಥಾನದಲ್ಲಿದ್ದರೆ, ಸಂಕೇತ ಮಂಜು ಗೌಡ 573/625 ಅಂಕ ಪಡೆದು 91.68% ದೊಂದಿಗೆ ದ್ವಿತೀಯ ಹಾಗೂ ಪವಿತ್ರಾ ಗಣಪಯ್ಯ ಗೌಡ 565/625, 90.40% ಫಲಿತಾಂಶ ಪಡೆದಿರುತ್ತಾರೆ. ಇವರೆಲ್ಲರು ಕೂಲಿ ಕಾರ್ಮಿಕರ ಬಡ ವಿದ್ಯಾರ್ಥಿಗಳಾಗಿದ್ದು, ಯಾವುದೇ ಟ್ಯೂಷನ್ ಪಾಠಕ್ಕೆ ಹೋಗದೆ ಮಾಡಿರುವ ಈ ಸಾಧನೆಯನ್ನು ಶಾಲೆಯ ಮುಖ್ಯಾಧ್ಯಾಪಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರ, ಸದಸ್ಯರು, ಪಾಲಕರು, ಊರ ನಾಗರಿಕರು ಅಭಿನಂದಿಸುತ್ತಾರೆ. ಅಲ್ಲದೇ ಕನ್ನಡ, ಹಿಂದಿ, ವಿಜ್ಞಾನ ವಿಷಯದಲ್ಲಿ ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ರ ಫಲಿತಾಂಶ ನೀಡಿರುತ್ತಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲಾ ಶಿಕ್ಷಕರನ್ನು ಮುಖ್ಯಾಧ್ಯಾಪಕರು ಶ್ಲಾಘಿಸುತ್ತಾರೆ.
ಸಂಕೇತ ಮಂಜು ಗೌಡ ದ್ವಿತೀಯ ಶರತ ಸುಬ್ರಾಯ ನಾಯ್ಕ, ಪ್ರಥಮ ಸ್ಥಾನ ಪವಿತ್ರಾ ಗಣಪಯ್ಯ ಗೌಡ, ತೃತೀಯ
Leave a Comment